ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, 42 ಮಂದಿ ಸಾವು ಶಂಕೆ

Prasthutha|

ಕಿನ್ನೌರ್: ಹಿಮಾಚಲ ಪ್ರದೇಶದ ಕಿನ್ನೌರ್ ಸುತ್ತಿನ ಬಾಬಾ ನಗರ್ ಪೋಲೀಸು ಠಾಣೆ ವ್ಯಾಪ್ತಿಯಲ್ಲಿ ನಡೆದ ಭೂಕುಸಿತದಲ್ಲಿ ಒಂದು ಬಸ್ಸಿನಲ್ಲಿದ್ದ 42 ಜನರು ಸಾವಿಗೀಡಾಗಿರುವ ಶಂಕೆ ಇದೆ ಎಂದು ರಕ್ಷಣಾ ತಂಡ ತಿಳಿಸಿದೆ.

- Advertisement -

ಬುಧವಾರ ಮಧ್ಯಾಹ್ನ ರಾಂಪುರ- ಜುರಿ ಹೆದ್ದಾರಿಯಲ್ಲಿ ಕಿನ್ನೌರ್ ಜಿಲ್ಲೆಯ ಚೌರಾ ಬಳಿ ನಡೆದ ಭಾರೀ ಭೂಕುಸಿತದಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳು ಒಂದು ಬಸ್ಸು, ಒಂದು ಟ್ರಕ್ ಮತ್ತು ಕೆಲವು ಲಘು ವಾಹನಗಳ ಮೇಲೆ ಬಿದ್ದಿವೆ. ಘಟನಾ ಸ್ಥಳಕ್ಕೆ ರಕ್ಷಣಾ ಪಡೆ ಧಾವಿಸಿ ಸಣ್ಣ ವಾಹನಗಳಿಂದ ಆರು ಜನರನ್ನು ರಕ್ಷಿಸಿದೆ.

ಜಿಲ್ಲಾಡಳಿತ, ಪೊಲೀಸ್, ಆಂಬುಲೆನ್ಸ್ ಗಳು, ವಿಪತ್ತು ನಿರ್ವಹಣಾ ಪ್ರಾಧಿಕಾರದವರು ಕೂಡಲೆ ಸ್ಥಳಕ್ಕೆ ತೆರಳಿದ್ದಾರೆ. ಪ್ರಯಾಣಿಕರಿದ್ದ ಬಸ್ಸಿನ ಮೇಲೆ ಮಣ್ಣು ಕಲ್ಲು ಬಿದ್ದು ಅದು ಮುಚ್ಚಿಹೋಗಿದೆ. ಅಲ್ಲಿಗೆ ರಕ್ಷಣಾ ತಂಡಕ್ಕೆ ತಲುಪಲು ಸಾಧ್ಯವಾಗಿಲ್ಲ. ಹಾಗಾಗಿ ಬಸ್ಸಿನಲ್ಲಿದ್ದ ಜನರ ಬಗೆಗೆ ಇಲ್ಲಿಯವರೆಗೆ ಏನೂ ಹೇಳಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Join Whatsapp