ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಬಿಹಾರಿ ಲಾಲು ಪ್ರಸಾದ್ ಯಾದವ್ !!

Prasthutha|

ನವದೆಹಲಿ: ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿಕ್ಕಿದ್ದು, ರಾಷ್ಟ್ರೀಯ ಪಕ್ಷಗಳು ಬಿರುಸಿನ ತಯಾರಿಯಲ್ಲಿದೆ. ಬಿಹಾರಿಯೊಬ್ಬರು ಸ್ಪರ್ಧಿಸಬೇಕೆಂಬ ನಂಬಿಕೆ ಮತ್ತು ಉದ್ದೇಶದಿಂದ ಲಾಲು ಪ್ರಸಾದ್ ಯಾದವ್ ಎಂಬವರು ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

- Advertisement -

ಆದರೆ ಇವರು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅ ಲ್ಲ ಹೊರತು ವ್ಯವಸಾಯ ಮಾಡಿ ಬದುಕನ್ನು ಮುಂದೆ ಸಾಗಿಸುತ್ತಾ , ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಸ್ಥಳೀಯ ಜನರ ಮೆಚ್ಚುಗೆಗೆ ಪಾತ್ರರಾಗಿಕೊಂಡು ಇದೀಗ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಹಾರದ ಸರನ್ ಜಿಲ್ಲೆಯ ನಿವಾಸಿ ಲಾಲು ಪ್ರಸಾದ್ ಯಾದವ್.

ಲಾಲು ಪ್ರಸಾದ್ ಯಾದವ್ ಜೂನ್ 15 ರಂದು ನಾಮಪತ್ರ ಸಲ್ಲಿಸಲು ತಯಾರಾಗಿದ್ದು, ಈಗಾಗಲೇ ಅವರು ದೆಹಲಿಗೆ ಟಿಕೆಟ್ ವಿಮಾನ ನಿಗದಿಪಡಿಸಿದ್ದಾರೆ.

- Advertisement -

ಇವರು 2017ರಲ್ಲಿಯೂ ನಾಮಪತ್ರ ಸಲ್ಲಿಸಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಸೂಚಕರಿಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿತ್ತು. ಈ ಬಾರಿ ಉತ್ತಮ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ

Join Whatsapp