ಲಖಿಂಪುರದಲ್ಲಿ ರೈತರ ಹತ್ಯೆ: ಕೇಂದ್ರ ಸಚಿವರ ವಜಾಕ್ಕೆ ಒತ್ತಾಯಿಸಿ ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ

Prasthutha|

ಲಕ್ನೋ: ಲಖಿಂಪುರ ಹಿಂಸಾಚಾರದಲ್ಲಿ ರೈತರ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಲೋಕಸಭೆಯಲ್ಲಿ ಬುಧವಾರ ವಿವಿಧ ಪ್ರತಿಪಕ್ಷಗಳ ಸಂಸದರು ಒಕ್ಕೊರಲಿನಿಂದ ಒತ್ತಾಯಿಸಿ ಧರಣಿ ನಡೆಸಿದ್ದು, ಗದ್ದಲ, ಕೋಲಾಹಲ ಉಂಟಾದ್ದರಿಂದ ಅಧಿವೇಶವನ್ನು ಗುರುವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.

- Advertisement -

ಲಖಿಂಪುರ ಹಿಂಸಾಚಾರದಲ್ಲಿ ರೈತರ ಹತ್ಯೆಯಲ್ಲಿ ಸಚಿವರ ಪುತ್ರ ಶಾಮೀಲಾಗಿದ್ದಾರೆ ಮತ್ತು ಹತ್ಯೆ ಪೂರ್ವಯೋಜಿತ ಎಂದು ವಿಶೇಷ ತನಿಖಾ ತಂಡ ವರದಿ ಆಧರಿಸಿ ಪ್ರತಿಪಕ್ಷಗಳು ಧರಣಿಗೆ ಇಳಿದಿವು.

ಲಖಿಂಪುರ ಹಿಂಸಾಚಾರದ ಕುರಿತು ಎಸ್.ಐ.ಟಿ ಯ ವರದಿಯನ್ನು ಆಧರಿಸಿ ತುರ್ತು ಪ್ರಾಮುಖ್ಯತೆಯ ವಿಷಯವನ್ನು ಚರ್ಚಿಸಲು ಕಲಾಪವನ್ನು ಮುಂದೂಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಧಿವೇಶನದಲ್ಲಿ ಒತ್ತಾಯಿಸಿದರು. ಮಾತ್ರವಲ್ಲ ಮಿಶ್ರಾ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯವನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.

- Advertisement -

ಲಖಿಂಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಆಶಿಶ್ ಮಿಶ್ರಾ ಮತ್ತು ಇತರ 12 ಮಂದಿಯ ವಿರುದ್ಧ ಕೊಲೆ, ಕೊಲೆಯತ್ನ ಮತ್ತು ಇತರ ಕ್ರಿಮಿನಲ್ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್ 307, 326, 34 ರ ಅನ್ವಯ ಪ್ರಕರಣ ದಾಖಲಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ 13 ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ನೀಡಿದ್ದು, ಎಸ್.ಐ.ಟಿ ಅರ್ಜಿಯ ಕುರಿತ ವಿಚಾರಣೆ ನಡೆಯಬೇಕಿದೆ.

Join Whatsapp