ಮಂಗಳೂರು: ಪಾಲಿಕೆಯ ಜಲಸಿರಿ ಯೋಜನೆ ಕಾಮಗಾರಿ ವೇಳೆ ದುರಂತ | ಮಣ್ಣಿನಡಿ ಸಿಲುಕಿದ ಮಹಿಳೆ, ಮಗುವಿನ ರಕ್ಷಣೆ

Prasthutha|

ಮಂಗಳೂರು: ತಡೆಗೋಡೆ ಕುಸಿದ ಪರಿಣಾಮ ಮಹಿಳೆ ಹಾಗೂ ಮಗು ಮಣ್ಣಿನಡಿ ಸಿಲುಕಿದ ಘಟನೆ ನಗರದ ಹೊರವಲಯದ ಬೊಂದೇಲ್ ಬಳಿಯ ಕೃಷ್ಣ ನಗರದಲ್ಲಿ ನಡೆದಿದೆ. ಮಗು ಪ್ರಾಣಾಪಾಯದಿಂದ ಪಾರಾದರೆ, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿದು ಬಂದಿದೆ.

- Advertisement -

ಮಹಾನಗರ ಪಾಲಿಕೆಯ ಜಲ ಸಿರಿ ಯೋಜನೆ ಕಾಮಗಾರಿ ವೇಳೆ ಈ ಘಟನೆ ನಡೆದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಕ್ಷಣವೇ ಮಗುವನ್ನು ಸ್ಥಳೀಯರು ರಕ್ಷಿಸಿದರೆ, ಮಹಿಳೆಯನ್ನು ಜೆಸಿಬಿ ಸಹಾಯದಿಂದ ಮೇಲಕ್ಕೆತ್ತಲಾಗಿದೆ.

Join Whatsapp