ಕುಂಭಮೇಳ, ನಕಲಿ ಕೋವಿಡ್ ತಪಾಸಣೆ ಹಗರಣ: ಲ್ಯಾಬೋರೇಟರಿಗಳಿಗೆ ಇ.ಡಿ ದಾಳಿ

Prasthutha|

ಉತ್ತರಾಖಂಡ್​: ಕೋವಿಡ್​ 19 ಮಧ್ಯೆಯೂ ಕುಂಭಮೇಳ ನಡೆದಿತ್ತು. ಅದಾದ ಬಳಿಕ ಕೋವಿಡ್​ ಪ್ರಕರಣಗಳು ಹೆಚ್ಚಿದ್ದವು. ನಂತರ ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೋವಿಡ್​ 19 ತಪಾಸಣೆ ಮಾಡಲು ಡಯಾಗ್ನೋಸ್ಟಿಕ್​ ಸಂಸ್ಥೆಗಳಿಗೆ ಉತ್ತರಾಖಂಡ ಸರ್ಕಾರವೇ ಗುತ್ತಿಗೆ ನೀಡಿತ್ತು. ಅದರ ಅನ್ವಯ ಈ ಲ್ಯಾಬೋರೇಟರಿಗಳು ಜನರಿಗೆ ಕೊರೋನಾ ಆ್ಯಂಟಿಜೆನ್​ ಟೆಸ್ಟ್​ ಮತ್ತು ಆರ್ ​ಟಿ-ಪಿಸಿಆರ್​ ಟೆಸ್ಟ್ ​ಗಳನ್ನು ಮಾಡಿ ರಿಪೋರ್ಟ್​ ನೀಡಬೇಕಾಗಿತ್ತು. ಆದರೆ ಲ್ಯಾಬೋರೇಟರಿಗಳು ಅದೆಷ್ಟೋ ಜನರಿಗೆ ಕೋರೊನಾ ತಪಾಸಣೆಯನ್ನೇ ಮಾಡದೆ ವರದಿ ನೀಡಿದ್ದವು. ಅದಕ್ಕಾಗಿ ಹಣ ಪಡೆದಿದ್ದಲ್ಲದೆ, ಸರ್ಕಾರಕ್ಕೆ ತೋರಿಸಲು ನಕಲಿ ಬಿಲ್​ ಗಳನ್ನೂ ಸೃಷ್ಟಿಸಿದ್ದವು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಉತ್ತಾರಖಂಡ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು.

- Advertisement -

ಈ ಲ್ಯಾಬೋರೇಟರಿಗಳು ಹೇಗೆ ಜನರನ್ನು ವಂಚಿಸಿವೆ ಎಂಬುದನ್ನು ಇಡಿ ವಿವರಿಸಿದೆ. ಒಬ್ಬರ ಸ್ಯಾಂಪಲ್​​ ತಪಾಸಣೆಯ ವರದಿಯನ್ನೇ ಹಲವರಿಗೆ ನೀಡಿದ್ದಾಗಿ ತಿಳಿಸಿದೆ. ಅದೆಷ್ಟರ ಮಟ್ಟಿಗೆ ಎಡವಟ್ಟು ಮಾಡಿಕೊಂಡಿವೆ ಎಂದರೆ, ಕುಂಭಮೇಳದಲ್ಲಿ ಪಾಲ್ಗೊಳ್ಳದೆ, ಕೋವಿಡ್​ ತಪಾಸಣೆಗೆ ಒಳಗಾಗದೆ ಇರುವವರ ಮೊಬೈಲ್​ ಗೂ ನೆಗೆಟಿವ್​ ರಿಪೋರ್ಟ್ ಹೋಗಿದೆ ಎಂದು ಇಡಿ ಮಾಹಿತಿ ನೀಡಿದೆ. ಸದ್ಯ ತನಿಖೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಐದು ಲ್ಯಾಬೋರೇಟರಿಗಳ ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೇರಿದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದೆ. ಸದ್ಯ ಈ ಲ್ಯಾಬೋರೇಟರಿಗಳ ಲೈಸೆನ್ಸ್​ ರದ್ದುಗೊಳಿಸಲಾಗಿದ್ದು, ಯಾವುದೇ ರೋಗ ತಪಾಸಣೆ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದೆ.

Join Whatsapp