ಕೊಡಗು: ದೇವಸ್ಥಾನದ ವಿಗ್ರಹವನ್ನು ಕದ್ದೊಯ್ದ ಅರ್ಚಕ: ವೀಡಿಯೋ ವೈರಲ್

Prasthutha|

ಮಡಿಕೇರಿ: ತಾನು ಪೂಜೆ ಮಾಡುವ ದೇವರ ವಿಗ್ರಹವನ್ನು ದೇವಸ್ಥಾನದ ಅರ್ಚಕನೇ ಕದ್ದಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

- Advertisement -

ವಿರಾಜಪೇಟೆ ಸಮೀಪದ ಪೆರುಂಬಾಡಿ – ಬಾಳುಗೋಡು ದೇವಸ್ಥಾನವೊಂದರಲ್ಲಿ ಬುಧವಾರ ಘಟನೆ ನಡೆದಿದೆ.

ಅರ್ಚಕನು ವಿಗ್ರಹವನ್ನು ಕೈ ಚೀಲದಲ್ಲಿ ಹಾಕಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೋರ್ವ ದೇವಸ್ಥಾನ ಆಡಳಿತ ಮಂಡಳಿಗೆ ವಿಷಯವನ್ನು ತಿಳಿಸಿದರು ಎನ್ನಲಾಗಿದೆ. ಆಡಳಿತ ಮಂಡಳಿಯವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವಿಗ್ರಹ ಕಳವಾಗಿರುವುದು ಕಂಡುಬಂದಿತು. ಕೂಡಲೇ ದೇವಸ್ಥಾನದ ಅರ್ಚಕನಿಗೆ ಕರೆ ಮಾಡಿದ ಆಡಳಿತ ಮಂಡಳಿಯವರು “ವಿಗ್ರಹವನ್ನು ಕೊಂಡೊಯ್ಯುವುದನ್ನು ಸ್ಥಳೀಯರು ನೋಡಿದ್ದಾರೆ, ಹಾಗಾಗಿ ಕೂಡಲೇ ವಿಗ್ರಹದೊಂದಿಗೆ ದೇವಸ್ಥಾನಕ್ಕೆ ಬರಬೇಕೆಂದು” ತಿಳಿಸಿದರು ಎನ್ನಲಾಗಿದೆ.

- Advertisement -

ಬಳಿಕ ವಿಗ್ರಹದೊಂದಿಗೆ ಅರ್ಚಕನು ದೇವಸ್ಥಾನಕ್ಕೆ ಬಂದು ತಪ್ಪನ್ನು ಒಪ್ಪಿಕೊಳ್ಳುತ್ತಿರುವುದನ್ನು ಸ್ಥಳೀಯರು ವೀಡಿಯೋ ಮಾಡಿದ್ದಾರೆ. ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಇದೇ ದೇವಸ್ಥಾನದಲ್ಲಿ ಅರ್ಚಕನಾಗಿದ್ದಾರೆಂದು ತಿಳಿದುಬಂದಿದೆ. ಸದ್ಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Join Whatsapp