ಕೊಡಗು: ಭೂಕುಸಿತದಿಂದ ಕೊಚ್ಚಿಹೋದ ಕಾಫಿ ತೋಟ

Prasthutha|

ಮಡಿಕೇರಿ: ಸೋಮವಾರಪೇಟೆ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿಯಲ್ಲಿ ಭೂಕುಸಿತವಾಗಿದೆ.

- Advertisement -

ಊರುಗುತ್ತಿಯ ವೆಂಕಟೇಶ್ ಎಂಬವರಿಗೆ ಸೇರಿದ ಕಾಫಿ ತೋಟ ಭೂಕುಸಿತದಿಂದ ಕೊಚ್ಚಿ ಹೋಗಿದೆ. ನಿನ್ನೆ  ಸೋಮವಾರಪೇಟೆಯ ಹರಪಳ್ಳಿಯಲ್ಲಿ ಭೂ ಕುಸಿತವಾಗಿತ್ತು. ಇದೀಗ ಊರುಗುತ್ತಿಯಲ್ಲಿ ಭೂಕುಸಿತವಾಗಿರುವುದರಿಂದ ಜನರು ಆತಂಕದಲ್ಲಿದ್ದಾರೆ.

Join Whatsapp