ಪಬ್ ನಲ್ಲಿ ‘ಕಿರಿಕ್ ಕೀರ್ತಿ’ ಕಿರಿಕ್ : ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿ ವ್ಯಕ್ತಿ ಪರಾರಿ

Prasthutha|

ಬೆಂಗಳೂರು: ಫೋಟೋ ತೆಗೆದುಕೊಂಡ ಅಭಿಮಾನಿಯೊಂದಿಗೆ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಕಿರಿಕ್ ಮಾಡಿಕೊಂಡಿಕೊಂಡಿದ್ದು ಪ್ರಕರಣವು ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸದಾಶಿವನಗರದ ಹ್ಯಾಮರ್ಡ್ ಪಬ್ ನಲ್ಲಿ ನಿನ್ನೆ ತಡರಾತ್ರಿ ಪಕ್ಕದ ಟೇಬಲ್ ನಲ್ಲಿದ್ದ ವ್ಯಕ್ತಿ ಕಿರಿಕ್ ಕೀರ್ತಿ ಅವರ ಫೋಟೋ ತೆಗೆದುಕೊಂಡಿದ್ದಾರೆ.

- Advertisement -


ಅಭಿಮಾನದಿಂದ ಫೊಟೋ ತೆಗೆದುಕೊಂಡಿದ್ದ ವ್ಯಕ್ತಿಯ ಮೇಲೆ ಕೀರ್ತಿ ಫೋಟೋ ಏಕೆ ತೆಗೆದೆ ಎಂದು ದರ್ಪ ತೋರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ತಪ್ಪಾಗಿದೆ ಎಂದು ಅಭಿಮಾನಿ ಕ್ಷಮೆ ಕೇಳಿದರೂ ಬಿಡದೇ ಕಿರಿಕ್ ಕೀರ್ತಿ ಬಾಯಿಗೆ ಬಂದ ರೀತಿ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.


ಈ ಹಿನ್ನೆಲೆಯಲ್ಲಿ ರೋಸಿಹೋದ ವ್ಯಕ್ತಿ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ

Join Whatsapp