ಕಿನ್ಯ| ಮಸೀದಿಯ ಬಾವಿಗೆ ಬಿದ್ದ ಕಡವೆಯ ರಕ್ಷಣೆ

Prasthutha|

ಮಂಗಳೂರು: ಕಡವೆಯೊಂದು ಮಸೀದಿ ಬಾವಿಗೆ ಬಿದ್ದ ಘಟನೆ ಕಿನ್ಯ ಗ್ರಾಮದ ಉಕ್ಕುಡದಲ್ಲಿ ನಡೆದಿದೆ.

- Advertisement -

ಕಡವೆಯೊಂದು ಮಸೀದಿ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಮಸೀದಿಗೆ ಬಂದಿದ್ದ ಸ್ಥಳೀಯರು  ಅರಣ್ಯ ಇಲಾಖೆ, ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಡವೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದು, ಅರಣ್ಯ ಇಲಾಖಾಧಿಕಾರಿಗಳು ಕಡವೆಗೆ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ.

ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಮಾರ್ಗದರ್ಶನದಲ್ಲಿ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ, ಅರಣ್ಯ ರಕ್ಷಕಿ ಸೌಮ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Join Whatsapp