12 ಕೋಟಿ ರೂ ಆರ್ಥಿಕ ನೆರವು ಘೋಷಿಸಿದ ಕೆ.ಜಿ.ಎಫ್ ಬಾಬು: 20 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Prasthutha|

 ಬೆಂಗಳೂರು: ಕೋಲಾರ ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿ ಇರುವ 2ಲಕ್ಷ 40 ಸಾವಿರ ಕುಟುಂಬಕ್ಕೆ ಮತ್ತು 20 ಸಾವಿರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಉಮ್ರಾ ಚಾರಿಟಬಲ್ ಫೌಂಡೇಷನ್ ಸಂಸ್ಥಾಪಕ ಹಾಗೂ ಸಮಾಜ ಸೇವಕ ಕೆ.ಜಿ.ಎಫ್ ಬಾಬು ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾಜಸೇವೆಗೆ ಅ.10ರಂದು ನರಸಾಪುರದಲ್ಲಿ ಚಾಲನೆ ನೀಡಲಾಗುತ್ತದೆ. ಈ ಆರ್ಥಿಕ ನೆರವು ಪಡೆಯಲು ಇಚ್ಛಿಸುವವರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರದ ಜೊತೆಗೆ ಅರ್ಜಿ ಸಲ್ಲಿಸಬೇಕು. ಈ ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು 9845070999 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಹೇಳಿದರು.

   4 ಸಾವಿರ ಕೋಟಿ ರೂಪಾಯಿ ಸಂಪತ್ತು ಒಡೆಯ ನಾನು , 130 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟುತ್ತೇನೆ ಮತ್ತು ವಾರ್ಷಿಕ 20 ಕೋಟಿ ರೂಪಾಯಿ ಶಿಕ್ಷಣಕ್ಕೆ ಸಹಾಯಧನ ನೀಡುತ್ತಿದ್ದೇನೆ. ಕೊವಿಡ್ ಸಾಂಕ್ರಾಮಿಕ ರೋಗದಿಂದ ಕಳೆದ ಎರಡು ವರ್ಷಗಳಿಂದ ಶಾಲೆ ,ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗುತ್ತಿಲ್ಲ .ಇದೀಗ ಶಾಲಾ ,ಕಾಲೇಜು ಆರಂಭವಾದರೂ ಶುಲ್ಕ ಕಟ್ಟಲು ಅವರ ಬಳಿ ಹಣವಿಲ್ಲ. ಆದ್ದರಿಂದ ಕೋಲಾರ ಜಿಲ್ಲೆ 30 ಶಾಲಾ , ಕಾಲೇಜಿನ 20ಸಾವಿರ ಮಕ್ಕಳಿಗೆ 8 ಕೋಟಿ ಅನುದಾನ ನೀಡಲಾಗುತ್ತಿದೆ. ಕೊವಿಡ್ ಕಾರಣದಿಂದ ಕೋಲಾರ ಜಿಲ್ಲೆಯಲ್ಲಿ ಜನರಿಗೆ ಉದ್ಯೋಗವವಿಲ್ಲ ಮತ್ತು ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. ಅಂತಹ ಕುಟುಂಬಗಳಿಗೆ ಸಹಾಯ ಮಾಡಬೇಕೆಂದು ಸರಿ ಸುಮಾರು ಎರಡು ಲಕ್ಷ ನಲವತ್ತು (2.40)ಕುಟುಂಬಗಳಿಗೆ 4 ಮಂದಿ ಇರುವ ಕುಟುಂಬಕ್ಕೆ 2 ಸಾವಿರ ಮತ್ತು 6 ಸದಸ್ಯರು ಇರುವ ಕುಟುಂಬಕ್ಕೆ 3ಸಾವಿರ , 8 ಜನರು ಇರುವ ಕುಟುಂಬಕ್ಕೆ 4 ಸಾವಿರ ಮತ್ತು 10 ಜನ ಸದಸ್ಯರು ಇರುವ ಕುಟುಂಬಕ್ಕೆ 5ಸಾವಿರ ನೀಡಲಾಗುವುದು ಎಂದು ಹೇಳಿದರು.

- Advertisement -

ಕೋಲಾರ ಜಿಲ್ಲೆಯಿಂದ ವಿದ್ಯಾರ್ಥಿ ಐ.ಎ.ಎಸ್.ಮತ್ತು ಐ.ಪಿ.ಎಸ್. ಹಾಗೂ ಸರ್ಕಾರದಲ್ಲಿ  ಉನ್ನತ ಸ್ಥಾನಮಾನದಲ್ಲಿ ಇರಬೇಕು ಎಂಬ ಬಯಕೆ ನನ್ನದು ಎಂದು ಕೆ.ಜಿ.ಎಫ್.ಬಾಬು ಹೇಳಿದರು.

ಹೆಚ್ಚಿನ ಮಾಹಿತಿ ಪಡೆಯಲು: ಉಮ್ರಾ ಚಾರಿಟಬಲ್ ಫೌಂಡೇಷನ್   ಮೊಬೈಲ್ ಸಂಖ್ಯೆ: 9845070999

Join Whatsapp