ಹಿರಿಯ ಚಿಂತಕ ಟಿ.ಕೆ.ಅಬ್ದುಲ್ಲಾ ಸಾಹೇಬ್ ನಿಧನ

Prasthutha|

ಕಲ್ಲಿಕೋಟೆ: ಪ್ರಮುಖ ವಿದ್ವಾಂಸ, ಚಿಂತಕ, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸ್ಥಾಪಕ ಸದಸ್ಯ ಟಿ. ಅಬ್ದುಲ್ಲಾ(92) ನಿಧನರಾಗಿದ್ದಾರೆ. ಅವರು ಕಲ್ಲಿಕೋಟೆಯಲ್ಲಿ 1929ರಲ್ಲಿ ಜನಿಸಿದ್ದರು.

- Advertisement -

ಜಮಾತ್-ಇ-ಇಸ್ಲಾಮಿ ರಾಜ್ಯ ಮಂಡಳಿಯ ಸದಸ್ಯರಾಗಿದ್ದ ಅವರು ಅಖಿಲ ಭಾರತ ಸಮಾಲೋಚನಾ ಸಮಿತಿಯ ಸದಸ್ಯರಾಗಿದ್ದಾರೆ.
ಅವರು ಪ್ರಬೋಧನಮ್ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಅವರು ಕೋಯಿಕ್ಕೋಡ್ ಜಿಲ್ಲೆಯ ಆಯಂಜೇರಿಯ ತಾರಕಂಡಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮತ್ತು ಫಾತಿಮಾ ದಂಪತಿಯ ಮಗನಾಗಿ 1929 ರಲ್ಲಿ ಜನಿಸಿದರು.

- Advertisement -

ಪತ್ನಿ ಆಮಿನಾ, ಮಕ್ಕಳಾದ ಟಿಕೆಎಂ ಇಕ್ಬಾಲ್, ಟಿ.ಕೆ.ಫಾರೂಖ್, ಸಾಜಿದ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Join Whatsapp