ಅಗ್ನಿಪಥ್ ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕೇರಳ ಹೈಕೋರ್ಟ್

Prasthutha|

ತಿರುವನಂತಪುರ: ಸೇನಾ ನೇಮಕಾತಿ ಕುರಿತ ‘ಅಗ್ನಿಪಥ್’ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದೆ.

- Advertisement -

ಅರ್ಜಿ ಸೇನೆಗೆ ಸಂಬಂಧಿಸಿದ್ದಾಗಿರುವುದರಿಂದ ಈ ಅರ್ಜಿಯನ್ನು ಸಶಸ್ತ್ರ ಪಡೆಗಳ ನ್ಯಾಯಮಂಡಳಿ -ಎಎಫ್ಟಿ ಗೆ ಸಲ್ಲಿಸಬಹುದು ಎಂದು ಹೇಳಿ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಸಿ ಪಿ ಮುಹಮ್ಮದ್ ನಿಯಾಝ್ ಅವರ ನೇತೃತ್ವದ ಪೀಠ ಅರ್ಜಿಯನ್ನು ವಜಾಗೊಳಿಸಿತು.

ಅರ್ಜಿದಾರರೆಲ್ಲರೂ ಎನ್ ಸಿಸಿ ಕೆಡೆಟ್ ಗಳಾಗಿದ್ದು ‘ಸಿ’ ಸರ್ಟಿಫಿಕೇಟ್ಅನ್ನು ಪಡೆದವರಾಗಿದ್ದರು. ಆ ಮೂಲಕ ಅವರು ಸಶಸ್ತ್ರ ಪಡೆಗಳ ನೇಮಕಾತಿಗೆ ಅರ್ಹತೆಯನ್ನು ಹೊಂದಿದ್ದು ಕೇಂದ್ರ ಪ್ರವೇಶ ಪರೀಕ್ಷೆಯಿಂದ ವಿನಾಯತಿ ಪಡೆದವರಾಗಿದ್ದರು.

- Advertisement -

ತಮಗೆ ಸೇನೆ ಸೇರಲು ಅರ್ಹತೆಗಳಿದ್ದವು. ಆದರೆ ಜೂನ್ 2022ರಲ್ಲಿ, ರಕ್ಷಣಾ ಸಚಿವಾಲಯ ಅಗ್ನಿಪಥ್ ಯೋಜನೆ ಕುರಿತು ಅಧಿಸೂಚನೆಯನ್ನು ಹೊರಡಿಸಿ ತಮ್ಮ (ಅರ್ಜಿದಾರರ) ನೇಮಕಾತಿ ಒಳಗೊಂಡಂತೆ ಎಲ್ಲಾ ಬಾಕಿಯಿರುವ ನೇಮಕಾತಿಗಳನ್ನು ರದ್ದುಗೊಳಿಸಿತು. ಹೀಗಾಗಿ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗಿದೆ. ಭಾರತೀಯ ಸೇನೆಗೆ ತಮ್ಮನ್ನು ಆಯ್ಕೆ ಮಾಡದಿರುವುದು ಕಾನೂನುಬಾಹಿರ, ಅನಿಯಂತ್ರಿತ ಹಾಗೂ ತಾರತಮ್ಯದಿಂದ ಕೂಡಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

Join Whatsapp