ಡ್ರಗ್ಸ್ ಪ್ರಕರಣ| ಕೇರಳ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನಿಗೆ ಜಾಮೀನು

Prasthutha|

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

- Advertisement -

ಬಂಧನಕ್ಕೊಳಗಾಗಿ ನಾಳೆಗೆ ಒಂದು ವರ್ಷ ಪೂರ್ತಿಯಾಗುತ್ತಿದ್ದಂತೆಯೇ ಬಿನೀಶ್ ಗೆ ಜಾಮೀನು ಲಭಿಸಿದೆ. ಈಡಿ ದಾಖಲಿಸಿರುವ ಪ್ರಕರಣದಲ್ಲಿ ಬಿನೀಶ್ ನಾಲ್ಕನೇ ಆರೋಪಿ.

2020 ರ ಆಗಸ್ಟ್ ನಲ್ಲಿ ಕೇರಳದ ಕೊಚ್ಚಿ ಮೂಲದ ಅನೂಪ್ ಮೊಹಮ್ಮದ್, ತ್ರಿಶೂರ್ ಮೂಲದ ರಿಜೇಶ್ ರವೀಂದ್ರನ್ ಮತ್ತು ಕನ್ನಡ ಧಾರಾವಾಹಿ ನಟಿ ಡಿ.ಅನಿಖಾ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು. ಅವರನ್ನು ವಿಚಾರಣೆ ನಡೆಸಿದಾಗ ಬಿನೀಶ್ ನ ಹೆಸರು ಕೇಳಿ ಬಂದಿತ್ತು, ಬಳಿಕ ಈಡಿ ಬಿನೀಶ್ ನನ್ನು ಬಂಧಿಸಿತ್ತು.

Join Whatsapp