ಕಾಸರಗೋಡು: ಆರೋಪಿ ಪರಾರಿ; ಪೊಲೀಸರ ಅಮಾನತು

Prasthutha|

ಕಾಸರಗೋಡು: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

- Advertisement -

ಕಣ್ಣೂರು ಸಶಸ್ತ್ರ ಮೀಸಲು ಪಡೆಯ ಎ ಎಸ್ಐ ಸಜೀವನ್, ಜಶೀರ್ ಮತ್ತು ಅರುಣ್ ರನ್ನು ಡಿಐಜಿ ರಾಹುಲ್ ಆರ್ ನಾಯರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆರೋಪಿ ಕಾಸರಗೋಡು ಆಲಂಪಾಡಿಯ ಅಮೀರಲಿ (23)  ಅಮಲು ಪದಾರ್ಥ  ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ಸೋಮವಾರ ಬೆಳಿಗ್ಗೆ  ಬೇರೊಂದು ಪ್ರಕರಣಕ್ಕೆ  ಸಂಬಂಧಿಸಿ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆ ತರುತ್ತಿದ್ದ ವೇಳೆ  ಪೊಲೀಸರ ಗಮನ ಬೇರೆಡೆ ಸೆಳೆದು ಪರಾರಿಯಾಗಿದ್ದಾನೆ. ಕಾಸರಗೋಡು ವಿದ್ಯಾನಗರ  ಬಿ.ಸಿ.ರೋಡ್ ನಲ್ಲಿ ಘಟನೆ ನಡೆದಿದೆ.

- Advertisement -

ಆರೋಪಿಯ ಹುಡುಕಾಟಕ್ಕಾಗಿ ಶೋಧ ಮುಂದುವರಿಯುತ್ತಿದ್ದು, ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp