ಕೇರಳದಲ್ಲಿ ನಂದಿನಿಯ ಮಾರಾಟ ಯೋಜನೆಯನ್ನು ಮರುಪರಿಶೀಲಿಸಿ : ಕರ್ನಾಟಕಕ್ಕೆ ಪತ್ರ ಬರೆದ ಹಾಲು ಒಕ್ಕೂಟ

Prasthutha|

ಬೆಂಗಳೂರು: ಕೇರಳದಲ್ಲಿ ನಂದಿನಿಯ ಮಾರಾಟ ಯೋಜನೆಯನ್ನು ಮರುಪರಿಶೀಲಿಸುವಂತೆ ಕರ್ನಾಟಕಕ್ಕೆ ಕೇರಳದಲ್ಲಿನ ಹಾಲು ಒಕ್ಕೂಟ ಪತ್ರ ಬರೆದಿದೆ.

- Advertisement -

ಕೇರಳದ ಸ್ಥಳೀಯ ಹಾಲಿನ ಬ್ರಾಂಡ್ ಮಿಲ್ಮಾವನ್ನು ರಕ್ಷಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್‌ನ ಮಧ್ಯಸ್ಥಿಕೆಯನ್ನು ಸಹ ಕೇರಳ ಸರ್ಕಾರ ಕೋರಿದೆ.

ಕರ್ನಾಟಕದ ನಂದಿನಿ ಮಲಪ್ಪುರಂ ಮತ್ತು ಕೊಚ್ಚಿ ಸೇರಿದಂತೆ ಕೇರಳದಲ್ಲಿ ಹಲವಾರು ಮಳಿಗೆಗಳನ್ನು ತೆರೆದಿದ್ದು, ಹೆಚ್ಚಿನ ಮಾರುಕಟ್ಟೆ ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ. ಕೇರಳದಲ್ಲಿ ಮಿಲ್ಮಾ ಸ್ವಲ್ಪ ಅಗ್ಗವಾಗಿದ್ದು, ಇದಕ್ಕಿಂತ ನಂದಿನಿ ಪ್ರತಿ ಲೀಟರ್‌ಗೆ ಒಂದೆರಡು ರೂಪಾಯಿ ಹೆಚ್ಚು ಇರುತ್ತದೆ. ಮಿಲ್ಮಾ ಮಾರಾಟ ನಿರಂತರವಾಗಿ ಹೆಚ್ಚುತ್ತಿದೆ. ಅದೇ ವೇಳೆ ನಂದಿನಿ ಮಳಿಗೆಗಳನ್ನು ತೆರೆಯುವುದರಿಂದ ನಮ್ಮ ವ್ಯವಹಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ ಇದು ಮಾರಾಟದ ಪ್ರಶ್ನೆಯಲ್ಲ, ಇದು ಸರಿಯಾದ ರೀತಿಯಲ್ಲ ಅಷ್ಟೇ. ನಾವೆಲ್ಲರೂ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅದು ಕರ್ನಾಟಕ ಒಕ್ಕೂಟ ಅಥವಾ ಅಮುಲ್ ಅಥವಾ ಮಿಲ್ಮಾವೇ ಆಗಿರಲಿ, ನಾವೆಲ್ಲರೂ ಸಹಕಾರಿ ಕಾನೂನುಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸ್ವಾಭಾವಿಕವಾಗಿ, ಕನಿಷ್ಠ ದ್ರವ ಹಾಲು ಮಾರಾಟ ಮಾಡುವ ವಿಷಯದಲ್ಲಿ ನಾವು ಆಯಾ ರಾಜ್ಯದ ಪ್ರದೇಶದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಮುಲ್ ಪ್ರವೇಶಕ್ಕೆ ಕರ್ನಾಟಕ ಒಕ್ಕೂಟವು ಆಕ್ಷೇಪ ವ್ಯಕ್ತಪಡಿಸುತ್ತಿರುವಾಗ, ಅವರು ಇತರ ರಾಜ್ಯಗಳಲ್ಲಿ ಅದೇ ಕೆಲಸವನ್ನು ಮಾಡಬಾರದು ಎಂದು ಕೇರಳ ಫೆಡರೇಶನ್ ಮುಖ್ಯಸ್ಥರು ಹೇಳಿದ್ದಾರೆ.

- Advertisement -

ದೇಶದ ಹಾಲು ಉತ್ಪಾದಕರ ಕಲ್ಯಾಣಕ್ಕಾಗಿ ಗುಜರಾತ್ ಮತ್ತು ಕರ್ನಾಟಕ ಒಟ್ಟಾಗಿ ಕೆಲಸ ಮಾಡಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಗ ಕರ್ನಾಟಕದಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಗುಜರಾತ್ ಮೂಲದ ಅಮುಲ್ ಅನ್ನು ಕರ್ನಾಟಕಕ್ಕೆ ತರುವ ಮೂಲಕ ನಂದಿನಿ ಬ್ರಾಂಡ್ ಅನ್ನು ಮುಗಿಸಲು ಪಿತೂರಿ ನಡೆಸಿದೆ ಎಂದು ಆರೋಪಿಸಿತ್ತು.

Join Whatsapp