ಬಾಯಲ್ಲಿ ಜೈಶ್ರೀರಾಮ್ ಮಾಡೋದೆಲ್ಲಾ ಹರಾಮ್ । ಬಿಜೆಪಿ – ಸಂಘಪರಿವಾರದ ವಿರುದ್ಧ ಟ್ವೀಟ್ ಮೂಲಕ ಹರಿಹಾಯ್ದ ಕಾಂಗ್ರೆಸ್ !

Prasthutha|

ಹಿಂದೂಗಳಿಗೆ ಶ್ರೀರಾಮನೆಂದರೆ ಭಕ್ತಿ, ಧ್ಯಾನ ಮತ್ತು ಜಪವಾಗಿದೆ. ಅದೇ ವೇಳೆ ಬಿಜೆಪಿಗರಿಗೆ ರಾಮನ ಹೆಸರು  ತಮ್ಮ ಕುಕೃತ್ಯಗಳಿಗೆ ಪರವಾನಗಿ ನೀಡಿದಂತೆ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಟ್ವಿಟ್ಟರ್  ಖಾತೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಹರಿಹಾಯ್ದಿದೆ. ದೇವಸ್ಥಾನದ ಹುಂಡಿ ಕಳ್ಳತನ, ಗೋಕಳ್ಳತನ, ಅತ್ಯಾಚಾರ, ಅಕ್ರಮ ಗಣಿಗಾರಿಕೆ,  ಹಫ್ತಾ ವಸೂಲಿ, ದೌರ್ಜನ್ಯ, ಅಕ್ರಮ ಸ್ಫೋಟಕ ಸಾಗಣೆ ಮುಂತಾದವುಗಳನ್ನು ಮಾಡುವ ಬಿಜೆಪಿಯಿಅನ್ನು ಶ್ರೀರಾಮನೆಂದೂ ಕ್ಷಮಿಸಲಾರ  ಎಂದು ಹೇಳಿದೆ.

- Advertisement -

ಟ್ವೀಟಿನಲ್ಲಿ ಇತ್ತಿಚೆಗಿನ ಬಿಜೆಪಿ ಮತ್ತು ಸಂಘಪರಿವಾರದ ಸದಸ್ಯರು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂಧನಕ್ಕೊಳಗಾದ ಪತ್ರಿಕಾ ವರದಿಗಳ ಸ್ಕ್ರೀನ್ ಶಾಟ್ ಗಳನ್ನು ಕೂಡಾ ಹಾಕಲಾಗಿದೆ. ಶೃಂಗೇರಿಯಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿದ ಸಂಘಪರಿವಾರದ ಆರೋಪಿಗಳ ಬಗ್ಗೆ, ಇತ್ತೀಚೆಗಿನ ಮಂಗಳೂರಿನ ಉಳ್ಳಾಲದಲ್ಲಿ ದೇವಸ್ಥಾನದ ಹುಂಡಿ ಕಳವುಗೈದ ಆರೋಪಿಯ ಕುರಿತು, ಡ್ರಗ್ಸ್ ದಂಧೆಯಲ್ಲಿ ಸಿಲುಕಿರುವ ಪಶ್ಚಿಮ ಬಂಗಾಳದ ಬಿಜೆಪಿ ನಾಯಕನ ಕುರಿತಾಗಿನ ವರದಿ, ಕಾರ್ಕಳದ ಭಜರಂಗದಲದ ಮುಖ್ಹಂಡನೋರ್ವ ದನಗಳ್ಳತನದ ಆರೋಪದಲ್ಲಿ ಸಿಲುಕಿಕೊಂಡಿದ್ದ ವರದಿ ಮತ್ತು ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟದ ಆರೋಪಿ ಬಿಜೆಪಿ ಮುಖಂಡನ ಕುರಿತಾಗಿ ಬಂದ ಪತ್ರಿಕಾ ವರದಿಗಳನ್ನು ಟ್ವೀಟೀನಲ್ಲಿ ಉಲ್ಲೇಖಿಸಲಾಗಿದೆ.

Join Whatsapp