ಕರಂಬಾರು ಫ್ರೆಂಡ್ಸ್ ಕ್ಲಬ್ ಕಚೇರಿ ಉದ್ಘಾಟನೆ, ಸಾಧಕರಿಗೆ ಸನ್ಮಾನ

Prasthutha|

ಬಜ್ಪೆ: ಕರಂಬಾರು ಫ್ರೆಂಡ್ಸ್ ಕ್ಲಬ್ ಹಾಗೂ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಬ್ಲಡ್ ಬ್ಯಾಂಕ್ ದೇರಳಕಟ್ಟೆ ಸಹಯೋಗದಲ್ಲಿ ಬಜ್ಪೆಯ ಕರಂಬಾರುನಲ್ಲಿ ಮರ್ಹೂಮ್ ನಿಸಾರ್ ಅಹ್ಮದ್ ಮತ್ತು ಮರ್ಹೂಮ್ ಎಂ.ಎಸ್. ಮೂಸಬ್ಬಾ ಅವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

- Advertisement -

ಇದೇ ವೇಳೆ ಗಣ್ಯರು ಫ್ರೆಂಡ್ಸ್ ಕ್ಲಬ್ ನ ನೂತನ ಕಚೇರಿಯನ್ನು ಉದ್ಘಾಟಿಸಿದರು.

ಎಸ್ ಡಿಪಿಐ ಬಜ್ಪೆ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಬಜ್ಪೆ ಮಾತನಾಡಿ, ರಕ್ತದಾನವು ಜಾತಿ, ಮತ, ಭೇದವಿಲ್ಲದೆ ಮಾಡುವಂತಹ ಅತ್ಯಂತ ಮಹತ್ತರವಾದ ಮತ್ತು ಅಮೂಲ್ಯವಾದ ದಾನ ಎಂದು ಹೇಳಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಮಾಜಿ ಸದಸ್ಯ ಸಿರಾಜ್ ಹುಸೇನ್ ಸಾಮಾಜಿಕ ಸಂಘಟನೆಯ ಕಾರ್ಯ ವೈಖರಿ ಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬನವರನ್ನು ಹಾಗೂ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ನಜೀರ್ ಬಜಪೆಯವರನ್ನು ಸನ್ಮಾನಿಸಲಾಯಿತು.

ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಸುಪ್ರೀತಾ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಅರ್ಬಿ, ಬಿಜೆಪಿ ಶಕ್ತಿ ಕೇಂದ್ರದ ಮಂಜು ಪ್ರಸಾದ್, ಧಾರ್ಮಿಕ ಮುಖಂಡರಾದ ಬಿ. ಕೆ. ಇಬ್ರಾಹಿಂ ಅಶ್ರಪಿ, ಖಾಮಿಲ್ ಮದನಿ, ನಝೀರ್ ಅಲಿ, ಭೋಜ ಸಾಲ್ಯಾನ್, ಅಬ್ದುಲ್ ಖಾದರ್, ಉದ್ಯಮಿ ಮನ್ಸೂರ್ ಆಲಿ, ನಿಸಾರ್ ಬಜಪೆ, ಫ್ರೆಂಡ್ಸ್ ಕ್ಲಬ್ ಕರಂಬಾರು ಇದರ ಅಧ್ಯಕ್ಷ ಹಸೈನಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಹೈದರ್ ಆಡ್ಮ ಸ್ವಾಗತಿಸಿ, ಸಾಜಿಲ್ ಉಳಾಯಿಬೆಟ್ಟು ನಿರೂಪಿಸಿ, ವಂದಿಸಿದರು.

Join Whatsapp