ಸಂಸದ ತೇಜಸ್ವಿ ಸೂರ್ಯನನ್ನು ಟೀಕಿಸಿದ ಕಂಗನಾ ರಣಾವತ್

Prasthutha|

ಮಂಡಿ: ಹಿಮಾಚಲ ಪ್ರದೇಶದ ಮಂಡಿ‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಾಲಿವುಡ್​ ನಟಿ ಕಂಗನಾ ರಣಾವತ್​ ಎಡೆಬಿಡದೆ ಕ್ಯಾಂಪೇನ್​ನಲ್ಲಿ ತೊಡಗಿದ್ದಾರೆ. ಕಂಗನಾ ತಮ್ಮ ಭಾಷಣದಲ್ಲಿ ತಮ್ಮದೇ ಪಕ್ಷದ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರನ್ನು ಟೀಕಿಸಿದ ಘಟನೆ ನಡೆದಿದೆ. ನವರಾತ್ರಿಯಂತಹ ಶುಭ ದಿನಗಳಲ್ಲೂ ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕಂಗನಾ ಹೇಳಿಕೆಯ ವಿಡಿಯೋ ವೈರಲ್​ ಆಗಿದೆ.

- Advertisement -

ನಟಿ ಕಂಗನಾ ಹೀಗೆ ಹೇಳಿದ್ದು ನಿಜ. ಆದರೆ ಆಕೆಯ ಉದ್ದೇಶ ಅದಾಗಿರಲಿಲ್ಲ.ಕಂಗನಾ ಮಾತಿನ ಭರದಲ್ಲಿ ಹೀಗೆ ಹೇಳಿದ್ದಾರೆ. ಬಿಹಾರದ ಮಾಜಿ ಡಿಸಿಎಂ, ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಅವರನ್ನು ಟೀಕಿಸುವ ಭರದಲ್ಲಿ ತೇಜಸ್ವಿ ಸೂರ್ಯ ಎಂದುಬಿಟ್ಟಿದ್ದಾರೆ.

ಕಂಗನಾ ತೇಜಸ್ವಿ ಯಾದವ್ ಅವರನ್ನು ಟೀಕಿಸುವಾಗ ತೇಜಸ್ವಿ ಸೂರ್ಯ ಎಂದ ವೀಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ನಟಿ ಕಂಗನಾ ಏನು ಹೇಳುತ್ತಿದ್ದಾರೆ ಎಂದು ಅವರಿಗೆ ಗೊತ್ತಾಗುತ್ತಿಲ್ಲ ಎಂದೆಲ್ಲ ಕಮೆಂಟ್ಸ್ ಮಾಡುತ್ತಿದ್ದಾರೆ.

- Advertisement -

ಕಂಗನಾ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ತೇಜಸ್ವಿ ಯಾದವ್, ಈ ಮೊಹತರ್ಮಾ (ಮಹಿಳೆ) ಯಾರು?’ ಎಂದು ವ್ಯಂಗ್ಯವಾಡಿದ್ದಾರೆ.

Join Whatsapp