ಮಂಜೇಶ್ವರ ಲಂಚ ಪ್ರಕರಣ| ನ್ಯಾಯಾಲಯದಲ್ಲಿ ರಹಸ್ಯ ಹೇಳಿಕೆ ನೀಡಿದ ಕೆ.ಸುಂದರ

Prasthutha|

ಕಾಸರಗೋಡು: ಕೇರಳ ಬಿಜೆಪಿ ನಾಯಕ ಕೆ.ಸುರೇಂದ್ರನ್ ಆರೋಪಿಯಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಚುನಾವಣೆಯ ನಾಮಪತ್ರ ಹಿಂಪಡೆಯಲು ಆಮಿಷವೊಡ್ಡಿದ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಕೆ. ಸುಂದರ ರಹಸ್ಯ ಹೇಳಿಕೆ ನೀಡಲು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರು ಹೊಸದುರ್ಗ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ಸಾಕ್ಷ್ಯ ನುಡಿದಿದ್ದಾರೆ.

- Advertisement -

ತನ್ನ ಹೇಳಿಕೆಯಲ್ಲಿ ದೃಢವಾಗಿ ನಿಲ್ಲುತ್ತೇನೆ ಎಂದು ನ್ಯಾಯಾಲಯದಲ್ಲಿ ರಹಸ್ಯ ಹೇಳಿಕೆ ನೀಡಿದ ನಂತರ ಕೆ.ಸುಂದರ ಪ್ರತಿಕ್ರಿಯಿಸಿದರು. ನಾಳೆ ಕೆ.ಸುಂದರ ಅವರ ತಾಯಿ ಸೇರಿದಂತೆ ಮೂವರ ಹೇಳಿಕೆಗಳನ್ನು ದಾಖಲಿಸಲಾಗುವುದು. ಪಡೆದ ಹಣದ ಪಾಲನ್ನು ಇವರಿಗೂ ನೀಡಿರುವುದಾಗಿ ಕೆ.ಸುಂದರ ಈ ಹಿಂದೆ ಹೇಳಿದ್ದರು. ಈ ಪ್ರಕರಣದಲ್ಲಿ ಸುಂದರ ಮತ್ತು ಅವರ ಸಂಬಂಧಿಕರ ಗೌಪ್ಯ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಇನ್ನಷ್ಟು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬಹುದೆಂದು ಹೇಳಲಾಗಿದೆ.

Join Whatsapp