ಜ್ಞಾನವಾಪಿ ಸಮೀಕ್ಷಾ ವರದಿ: ಬಹಿರಂಗಗೊಳಿಸುವುದರ ಕುರಿತು 24ರಂದು ನಿರ್ಧಾರ

Prasthutha|

ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸುವ ಮತ್ತು ಪ್ರತಿಗಳನ್ನು ವಾದಿ- ಪ್ರತಿವಾದಿಗಳಿಗೆ ನೀಡುವ ಕುರಿತು ಇದೇ ತಿಂಗಳ 24ರಂದು ನಿರ್ಧಾರವಾಗಲಿದೆ.

- Advertisement -

ವರದಿ ಬಹಿರಂಗಗೊಳಿಸುವುದನ್ನು ನಾಲ್ಕು ವಾರಗಳವರೆಗೆ ಮುಂದೂಡಬೇಕೆಂದು ಕೋರಿ ಎಎಸ್‌ಐ ಸಲ್ಲಿಸಿದ್ದ ಮನವಿಯನ್ನು ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್‌ ಪುರಸ್ಕರಿಸಿ ಈ ಆದೇಶ ನೀಡಿದ್ದಾರೆ. ಈ ಸಂದರ್ಭ ಎರಡೂ ಕಡೆಯ ವಕೀಲರು, ಎಎಸ್‌ಐ ವಕೀಲರು ನ್ಯಾಯಾಲಯದಲ್ಲಿ ಹಾಜರಿದ್ದರು.

- Advertisement -

Join Whatsapp