ಬೆಂಬಿಡದ ಸೋಲು: ಸಿಎಸ್ ಕೆ ನಾಯಕತ್ವಕ್ಕೆ ಜಡೇಜ ಗುಡ್ ಬೈ

Prasthutha|

ಮುಂಬೈ: ತೀವ್ರ ಸೋಲಿನಿಂದ ಕಂಗೆಟ್ಟಿರುವ ಐಪಿಎಲ್ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್( ಸಿಎಸ್ ಕೆ) ತಂಡದ ನಾಯಕತ್ವ ಸ್ಥಾನಕ್ಕೆ ರವೀಂದ್ರ ಜಡೇಜಾ ಗುಡ್ ಬೈ ಹೇಳಿದ್ದಾರೆ. ತಂಡದ ನಾಯಕತ್ವ ಸ್ಥಾನವನ್ನು ಮತ್ತೆ ಮಹೇಂದ್ರ ಸಿಂಗ್ ಧೋನಿಗೆ ಮರಳಿ ಒಪ್ಪಿಸಲು ಜಡೇಜಾ ನಿರ್ಧರಿಸಿದ್ದು, ಧೋನಿ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಸಿಎಸ್ ಕೆ ತಂಡ ತನ್ನ ಟ್ವಿಟರ್ ಮೂಲಕ ಮಾಹಿತಿ ನೀಡಿದೆ.

- Advertisement -

ಈ ಆವೃತ್ತಿಯ ಮೊದಲ ಪಂದ್ಯಾಟಕ್ಕೂ ಮೊದಲೇ ಧೋನಿ ಚೆನ್ನೈ ನಾಯಕ ಸ್ಥಾನವನ್ನು ಜಡೇಜಾಗೆ ಬಿಟ್ಟುಕೊಟ್ಟಿದ್ದರು. ಆದರೆ ಈ ಆಡಿದ 8 ಪಂದ್ಯಗಳ ಪೈಕಿ 2ರಲ್ಲಿ ಗೆಲುವು ಕಂಡಿರುವ ಸಿಎಸ್ ಕೆ 6 ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದೆ. ಇದೀಗ ಸೋಲಿನ ಪರಿಣಾಮ ನಾಯಕತ್ವ ಸ್ಥಾನದಿಂದ ಜಡ್ಡು ಕೆಳಗಿಳಿದಿದ್ದಾರೆ ಎನ್ನಲಾಗಿದೆ.

ಬಹುತೇಕ ಈ ಆವೃತ್ತಿಯಿಂದ ಚೆನ್ನೈ ತಂಡ ಹೊರಗೆ ಬಿದ್ದಿದೆ. ಇನ್ನಾಡುವ 6 ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳಲ್ಲಿ ಗೆದ್ದರಷ್ಟೆ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018 ಮತ್ತು 2021ರಲ್ಲಿ ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Join Whatsapp