ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿದ ಆರೋಪಿಗಳು ಮುಸ್ಲಿಮರಲ್ಲ ಎಂಬ ಕಾರಣಕ್ಕೆ BJP ಮೌನವೇ? : SDPI ಪ್ರಶ್ನೆ

Prasthutha|

ಮಂಗಳೂರು: ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿದ ಆರೋಪಿಗಳು ಮುಸ್ಲಿಮರಲ್ಲ ಎಂಬ ಕಾರಣಕ್ಕೆ RSS ಮತ್ತು BJP ಮೌನವೇ? ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ಪ್ರಶ್ನೆ ಮಾಡಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, “ಅಂದು ಮದಮಗನೊಬ್ಬ ಮೋಜಿಗಾಗಿ ಧರಿಸಿದ ದಿರಿಸು ಕೊರಗಜ್ಜನಿಗೆ ಮಾಡಿದ ಅಪಮಾನ ಎಂದು ಜಿಲ್ಲೆಯಲ್ಲಿ ಪ್ರತಿಭಟನೆ ಹೆಸರಲ್ಲಿ ಅಶಾಂತಿ ಹಬ್ಬಿಸಿದ್ದ RSS ಮತ್ತು BJP, ಇಂದು ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿದ ಆರೋಪಿಗಳು ಮುಸ್ಲಿಮರು ಅಲ್ಲ ಎಂಬ ಕಾರಣಕ್ಕೆ ಮೌನವೇ? ಪ್ರಕರಣದ ಬಗ್ಗೆ ಧ್ವನಿ ಎತ್ತಲು ಆರೋಪಿ ಮುಸ್ಲಿಂ ಆಗಿರಲೇ ಬೇಕು ಎಂಬುದು ಸಂಘದ ಲಿಖಿತ ನಿಯಮವೇ? ಎಂದು ಪ್ರಶ್ನಿಸಿದ್ದಾರೆ.

Join Whatsapp