ಪ್ರಧಾನಿಗಳೇ ಮಾತನಾಡಿ : ಸಮಾನ ಮನಸ್ಕರಿಂದ ಆನ್ ಲೈನ್ ಅಭಿಯಾನಕ್ಕೆ ಚಾಲನೆ

Prasthutha|

ನವದೆಹಲಿ : ಆಗಸ್ಟ್ 10 ರಿಂದ 15 ರವರೆಗೆ ಭಾರತದ ಸಮಾನ ಮನಸ್ಕರಿಂದ ಸಾಮಾಜಿಕ ಜಾಲತಾಣಗಳಲ್ಲಿ “ಮಾತಾಡಿ ಪ್ರಧಾನಿಗಳೇ ಮಾತನಾಡಿ” ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದೆ.

- Advertisement -

ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಭಾರತದ ಪ್ರಧಾನಿ ಅವರ ಭಾಷಣಕ್ಕೆ ಪ್ರಧಾನಿ ಮೋದಿಯವರು ಸಾರ್ವಜನಿರಿಂದ ಅಭಿಪ್ರಾಯ ಕೇಳಿದ ಹಿನ್ನಲೆಯಲ್ಲಿ ಪ್ರಸಕ್ತ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಪ್ರಧಾನಿ ಮೌನ ಮುರಿಯುವಂತಾಗಿಸುವ ನಿಟ್ಟಿನಲ್ಲಿ ಭಾರತೀಯ ಸಮಾನ ಮನಸ್ಕರಿಂದ ಈ ಅಭಿಯಾನವನ್ನು ಆಯೋಜಿಸಲಾಗಿದೆ ಎನ್ನಲಾಗಿದೆ.

ಅಭಿಯಾನದ ಭಾಗವಾಗಿ ವ್ಯಾಪಕವಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯ, ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ, ಮುಸ್ಲಿಮರ ಮೇಲಿನ ಗುಂಪು ಹತ್ಯೆ, ಅಸೀಫಾ ಅತ್ಯಾಚಾರ-ಕೊಲೆ, ಕಾರ್ಮಿಕ- ರೈತ ವಿರೋಧಿ ನಿಲುವು, ಮಹಿಳೆಯರ ಮೇಲಿನ ನಿರಂತರ ಶೋಷಣೆ, ಹಥ್ರಾಸ್ ಘಟನೆ, ಪೆಗಾಸೆಸ್ ಗೂಢಚರ್ಯೆ, ಹಿಂದುತ್ವವಾದಿಗಳ ಅಟ್ಟಹಾಸ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತಂತೆ ಪ್ರಧಾನಿ ಮೋದಿ ಯವರು ಸ್ವಾತಂತ್ರ್ಯದ ಭಾಷಣದಲ್ಲಿ ಉಲ್ಲೇಖಿಸುವಂತಾಗಲು ಈ ಅಭಿಯಾನದ ಉದ್ದೇಶವೆಂದು ಅಭಿಯಾನದ ಸಂಘಟಕರಲ್ಲೊಬ್ಬರಾಗಿರುವ ಕರ್ನಾಟಕ ವಿಧ್ಯಾರ್ಥಿ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಸರೋವರ್ ಬೆಂಕಿಕೆರೆ ಅವರು ತಿಳಿಸಿದ್ದಾರೆ. ಮಾತ್ರವಲ್ಲದೆ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕೂಡಾ ಅವರು ಸಾರ್ವಜನಿಕರನ್ನು ವಿನಂತಿಸಿದ್ದಾರೆ.

Join Whatsapp