ರೈತ ಹೋರಾಟ ಬೆಂಬಲಿಸಿ ಹರ್ಯಾಣದ INLD ಶಾಸಕ ಅಭಯ್ ಸಿಂಗ್ ಚೌಟಾಲ ರಾಜೀನಾಮೆ

Prasthutha|

ನವದೆಹಲಿ : ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಹರ್ಯಾಣದ ಭಾರತೀಯ ರಾಷ್ಟ್ರೀಯ ಲೋಕ ದಳ (ಐಎನ್ ಎಲ್ ಡಿ) ಶಾಸಕ ಅಭಯ ಸಿಂಗ್ ಚೌಟಾಲ ಬುಧವಾರ ರಾಜೀನಾಮೆ ನೀಡಿದ್ದಾರೆ.

- Advertisement -

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಕ್ರಿಯವಾಗಿರುವ ಅಭಯ್ ಸಿಂಗ್ ಮೂರು ದಿನಗಳ ಹಿಂದೆಯೇ ರಾಜೀನಾಮೆ ಸಲ್ಲಿಸಿದ್ದು, ಗಣರಾಜ್ಯೋತ್ಸವ ದಿನದಂದು ರೈತರ ಬೇಡಿಕೆ ಕೇಂದ್ರ ಸರಕಾರ ಒಪ್ಪದಿದ್ದಲ್ಲಿ ರಾಜೀನಾಮೆ ಅಂಗೀಕಾರ ಮಾಡುವಂತೆ ಮನವಿ ಮಾಡಿದ್ದರು. ಆ ಪ್ರಕಾರ, ಇಂದು ಸ್ಪೀಕರ್ ಜಿಯಾನ್ ಚಡ್ ಗುಪ್ತಾ ಶಾಸಕರ ರಾಜೀನಾಮೆ ಸ್ವೀಕರಿಸಿದ್ದಾರೆ.

ಮೂರು ಬಾರಿ ಶಾಸಕರಾಗಿರುವ ಅಭಯ್ ಸಿಂಗ್ ಗೆ ರೈತ ಮತಗಳೇ ಆಧಾರವಾಗಿರುವುದರಿಂದ ರೈತರ ಹೋರಾಟದಲ್ಲಿ ಅವರ ಪಕ್ಷ ಸಕ್ರಿಯವಾಗಿದೆ.

Join Whatsapp