ಚುನಾವಣಾ ಪ್ರಚಾರದ ವೇಳೆ ಕನ್ಹಯ್ಯ ಕುಮಾರ್ ಮೇಲೆ ಆ್ಯಸಿಡ್ ದಾಳಿ!

Prasthutha|

- Advertisement -

ಲಕ್ನೋ: ಚುನಾವಣಾ ಪ್ರಚಾರದ ವೇಳೆ ಜೆಎನ್ ಯು ಮಾಜಿ ವಿದ್ಯಾರ್ಥಿ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಮೇಲೆ ವ್ಯಕ್ತಿಯೊಬ್ಬ ಶಾಯಿ ಮಾದರಿಯ ದ್ರವವನ್ನು ಎರಚಿದ್ದು, ಆ್ಯಸಿಡ್ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಲಕ್ನೋದ ಕಾಂಗ್ರೆಸ್ ಕಚೇರಿಯಲ್ಲಿ ಕನ್ಹಯ್ಯ ಕುಮಾರ್ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ದಾಳಿ ನಡೆಸಲಾಗಿದೆ. ಇದು ಶಾಯಿಯಲ್ಲ ಆ್ಯಸಿಡ್ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

- Advertisement -

“ವ್ಯಕ್ತಿಯೊಬ್ಬ ಕನ್ಹಯ್ಯಾ ಕುಮಾರ್ ಮೇಲೆ ಆ್ಯಸಿಡ್ ಎರಚಲು ಯತ್ನಿಸಿದರಾದರೂ ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಆದರೆ ಅದರ ಕೆಲವು ಹನಿಗಳು ಅವರ ಅಕ್ಕಪಕ್ಕದಲ್ಲಿದ್ದ ಮೂರ್ನಾಲ್ಕು ಜನರ ಮೈಮೇಲೆ ಬಿದ್ದಿವೆ” ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

2018 ರಲ್ಲಿ ಗ್ವಾಲಿಯರ್‌ನಲ್ಲಿ ಕನ್ಹಯ್ಯಾ ಕುಮಾರ್ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮೇಲೆ ಇದೇ ರೀತಿ ದಾಳಿ ನಡೆದಿತ್ತು. ಹಿಂದೂ ಸೇನೆಯ ಸದಸ್ಯ ಮುಖೇಶ್ ಪಾಲ್ ಇಬ್ಬರ ಮೇಲೆಯೂ ಮಸಿ ಎರಚಿದ್ದ.

Join Whatsapp