ಎಐಎಡಿಎಂಕೆಯಲ್ಲಿ ಆಂತರಿಕ ಕಲಹ; ಇಪಿಎಸ್ ಬಣದ ಶಾಸಕರ ಬಂಧನ

Prasthutha|

ಚೆನ್ನೈ: ತಮಿಳುನಾಡಿನಲ್ಲಿ ವಿರೋಧ ಪಕ್ಷ ಎಐಎಡಿಎಂಕೆಯ ಇಪಿಎಸ್ ಮತ್ತು ಒಪಿಎಸ್ ಬಣಗಳ ಆಂತರಿಕ ಕಲಹ ಮತ್ತಷ್ಟು ಹೆಚ್ಚಾಗಿದೆ.

- Advertisement -

ಈ ಎರಡು ಬಣಗಳಲ್ಲಿ ಹೆಚ್ಚು ಪ್ರಬಲವಾಗಿರುವ ಇ ಪಳನಿಸ್ವಾಮಿ ಬಣವು ಹೊಸ ಉಪ ನಾಯಕನನ್ನು ಆಯ್ಕೆ ಮಾಡಿದ್ದು, ಓ ಪನ್ನೀರ್‌ಸೆಲ್ವಂ  ಅವರನ್ನು ಇಪಿಎಸ್ ಅವರ ಪಕ್ಕದ ಸೀಟನ್ನು ಬಿಟ್ಟು, ಬೇರೆ ಎಲ್ಲಿ ಬೇಕಾದರೂ ಕೂರಿಸಬೇಕು ಎಂದು ತಮಿಳುನಾಡು ವಿಧಾನಸಭೆ ಸ್ಪೀಕರ್‌ಗೆ ಅನೇಕ ಬಾರಿ ಪತ್ರ ಬರೆದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಎಐಎಡಿಎಂಕೆಯ ಇಪಿಎಸ್ ಬಣದ ಶಾಸಕರನ್ನು, ಕಲಾಪಕ್ಕೆ ಅಡ್ಡಿಪಡಿಸಿದ್ದಕಾಗಿ ಸದನದಿಂದ ಹೊರಗೆ ಹಾಕಲಾಗಿತ್ತು.

ಸದನದಲ್ಲಿನ ಎಐಎಡಿಎಂಕೆ ಉಪ ನಾಯಕನ ಸ್ಥಾನದಿಂದ ಓ ಪನ್ನೀರ್‌ಸೆಲ್ವಂ ಅವರನ್ನು ತೆಗೆದುಹಾಕದ ಸ್ಪೀಕರ್ ನಡೆಯನ್ನು ವಿರೋಧಿಸಿ ವಿಧಾನಸಭೆ ಹೊರಗೆ ಉಪವಾಸ ನಿರಶನ ನಡೆಸಲು ಮುಂದಾದ ವಿರೋಧ ಪಕ್ಷದ ನಾಯಕ ಇ ಪಳನಿಸ್ವಾಮಿ ಮತ್ತು ಎಐಎಡಿಎಂಕೆಯ ಇತರ ಶಾಸಕರನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp