ಬಿಜೆಪಿ ಮುಖಂಡನ ಒಡೆತನದ ಶಾಲೆಯಲ್ಲಿ ಹಣ ಸಂಗ್ರಹ| ಐಟಿ, ಚುನಾವಣಾ ಅಧಿಕಾರಿಗಳಿಂದ ಪರಿಶೀಲನೆ  

Prasthutha|

ಚಿಕ್ಕಬಳ್ಳಾಫುರ: ಬಿಜೆಪಿ ಮುಖಂಡನ ಒಡೆತನದ ಶಾಲೆಯಲ್ಲಿ ಹಣ ಸಂಗ್ರಹಿಸಿಟ್ಟಿರುವ ಬಗ್ಗೆ ದೂರು ಹಿನ್ನೆಲೆ ಐಟಿ ಅಧಿಕಾರಿಗಳು, ಸ್ಥಳೀಯ ಚುನಾವಣಾಧಿಕಾರಿಗಳು ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿಯ ಖಾಸಗಿ ಶಾಲೆಯ ಮಾಲೀಕರ ಮನೆ, ಶಾಲಾ ಕಟ್ಟಡಗಳ ಮೇಲೆ ದಾಳಿ ಮಾಡಲಾಗಿದೆ.

- Advertisement -

ಬಿಜೆಪಿಯ ಕಾನೂನು ಪ್ರಕೋಷ್ಠದಲ್ಲಿ ರಾಜ್ಯ ಕಾರ್ಯನಿರ್ವಾಹಕ ಸದಸ್ಯ ಬಿ.ವಿ.ಶ್ರೀನಿವಾಸ್​ಗೆ ಸೇರಿರುವ ಸಾಯಿರಾಮ್​ ಇಂಟರ್​ ನ್ಯಾಷನಲ್ ಶಾಲೆಯಲ್ಲಿ ಪರಿಶೀಲನೆ ಮಾಡಲಾಗಿದ್ದು, ಖಾಸಗಿ ಶಾಲೆಯ 2 ಕಟ್ಟಡ, ಮನೆಯಲ್ಲಿ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

Join Whatsapp