ಶೀನಾ ಬೋರಾ ಕೊಲೆ ಪ್ರಕರಣಕ್ಕೆ ತಿರುವು| ಆಕೆ ಇನ್ನೂ ಬದುಕಿದ್ದಾಳೆ ಎಂದ ಆರೋಪಿ ಇಂದ್ರಾಣಿ ಮುಖರ್ಜಿ!

Prasthutha|

ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣ ದೊಡ್ಡ ತಿರುವು ಪಡೆದಿದ್ದು, ಆಕೆ ಇನ್ನೂ ಕಾಶ್ಮೀರದಲ್ಲಿ ಜೀವಂತವಾಗಿರುವುದಾಗಿ ಶೀನಾ ಬೋರಾ ತಾಯಿ ಹಾಗೂ ಆರೋಪಿ ಇಂದ್ರಾಣಿ ಮುಖರ್ಜಿ ಹೇಳುವ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ಕೊಲೆ ಪ್ರಕರಣ ದೊಡ್ಡ ತಿರುವೊಂದನ್ನು ಪಡೆದುಕೊಂಡಿದೆ.

- Advertisement -

ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಇಂದ್ರಾಣಿ ಮುಖರ್ಜಿ ಪತ್ರ ಬರೆದಿದ್ದಾರೆ. ‘ತಮ್ಮ ಸಹ-ಕೈದಿಯೊಬ್ಬರು ಕಾಶ್ಮೀರದಲ್ಲಿ ಶೀನಾಳನ್ನು ನೋಡಿರುವುದಾಗಿ ಹೇಳಿದ್ದಾರೆ. ಕೂಡಲೇ ಅವಳನ್ನು ಹುಡುಕಿ’ ಎಂದು ಸಿಬಿಐಗೆ ಸದ್ಯ ಬೈಕುಲ್ಲಾ ಜೈಲಿನಲ್ಲಿರುವ ಮಾಜಿ ಮಾಧ್ಯಮ ಕಾರ್ಯನಿರ್ವಹಣಾಧಿಕಾರಿ ಇಂದ್ರಾಣಿ ಮುಖರ್ಜಿ ಇಂದ್ರಾಣಿ ಮುಖರ್ಜಿ ಪತ್ರ ಬರೆದಿದ್ದಾಳೆ.

- Advertisement -

ತನ್ನ 24ನೇ ವಯಸ್ಸಿನಲ್ಲಿ (ಏ. 24, 2012ರಲ್ಲಿ) ಶೀನಾ ಬೋರಾ ಹತ್ಯೆಗೀಡಾಗಿದ್ದರು. ಹತ್ಯೆ ಪ್ರಕರಣದಲ್ಲಿ ಇಂದ್ರಾಣಿ ಅವರಲ್ಲದೆ, ಅವರ ಮೊದಲ ಪತಿ ಸಂಜೀವ್ ಖನ್ನಾ, ಅವರ ಎರಡನೇ ಪತಿಯಾದ ಪತ್ರಿಕೋದ್ಯಮಿ ಪೀಟರ್ ಮುಖರ್ಜಿ ಕೂಡ ಆರೋಪಿಗಳಾಗಿದ್ದಾರೆ.

Join Whatsapp