ಉತ್ತರ ಪ್ರದೇಶ | ಮಸೀದಿಗೆ ನುಗ್ಗಿ ಧರ್ಮಗುರುಗಳಿಗೆ ಮಾರಣಾಂತಿಕ ಹಲ್ಲೆ

Prasthutha|

ದುಷ್ಕರ್ಮಿಗಳ ಗುಂಪೊಂದು ಮಸೀದಿಯೊಳಗೆ ನುಗ್ಗಿ ಅಲ್ಲಿದ್ದ ಇಮಾಮರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ದನ್ಕವುರ್, ರಾಂಪುರ ಮಜ್ರಾ ಗ್ರಾಮದಲ್ಲಿ ನಡೆದಿದೆ.

- Advertisement -


ಧರ್ಮಗುರು ನಾಸಿರ್ ಮುಹಮ್ಮದ್ ಅವರ ತಲೆ ಸೇರಿದಂತೆ ದೇಹದ ಇತರ ಕಡೆಗಳಿಗೆ ತೀವ್ರ ಗಾಯಗಳಾಗಿದ್ದು, ಮತ್ತೊಬ್ಬ ಧರ್ಮಗುರು ಫತೇಹ್ ಮುಹಮ್ಮದ್ ಅವರ ಬೆನ್ನಿಗೆ ಗಾಯವಾಗಿದೆ.
ದಾಳಿಯ ವೇಳೆ ಸ್ಥಳೀಯ ಕೆಲವರು ನಮಾಝ್ ನಿರತರಾಗಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ಇದುವರೆಗೆ 6 ಮಂದಿಯನ್ನು ಬಂಧಿಸಿದ್ದಾರೆ.

https://twitter.com/i/status/1401853872457412610


ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆಸಿಫ್ ಖಾನ್ ಈ ಕುರಿತು ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Join Whatsapp