ಮರ್ಹೂಮ್ ಹೈದರ್ ನೀರ್ಸಾಲ್ ಚಾರಿಟೇಬಲ್ ಟ್ರಸ್ಟ್ ಪುಂಜಾಲಕಟ್ಟೆ ವತಿಯಿಂದ ಇಫ್ತಾರ್ ಕೂಟ

Prasthutha|

ಪುಂಜಾಲಕಟ್ಟೆ: ಮರ್ಹೂಮ್ ಹೈದರ್ ನೀರ್ಸಾಲ್ ಚಾರಿಟೇಬಲ್ ಟ್ರಸ್ಟ್ ಪುಂಜಾಲಕಟ್ಟೆ ಇದರ ವತಿಯಿಂದ ಮರ್ಹೂಮ್ ಹೈದರ್ ನೀರ್ಸಾಲ್ ಉಜಿರೆ ಇವರ ಸ್ಮರಣಾರ್ಥ ಇಫ್ತಾರ್ ಕೂಟ ಪುಂಜಾಲಕಟ್ಟೆ ಜುಮಾ ಮಸೀದಿಯಲ್ಲಿ ನಡೆಯಿತು.

- Advertisement -


ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಖತೀಬ್ ಬಹು ಅಶ್ರಫ್ ಫೈಝಿ ಉಸ್ತಾದ್ ದುವಾ ನೆರವೇರಿಸಿದರು. ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಬೆಳ್ತಂಗಡಿ ವಿಧಾನ ಸಭಾ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಸಮಸ್ತ ಕೇರಳ ಇಸ್ಲಾಂ ಮತ ವಿಧ್ಯಾಬ್ಯಾಸ ಬೋರ್ಡ್ ಅಧೀನದಲ್ಲಿ ನಡೆದ 5ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಟಾಪ್ ಪ್ಲಸ್ ನೊಂದಿಗೆ ಉನ್ನತ ಅಂಕ (492/500) ಗಳಿಸಿದ ರೌಲತುಲ್ ಉಲೂಮ್ ಮದ್ರಸ ಪುಂಜಾಲಕಟ್ಟೆ ವಿಧ್ಯಾರ್ಥಿ ಮುಹಮ್ಮದ್ ಅನೀಕ್ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

Join Whatsapp