ಸಾಧ್ಯವಿದ್ದರೆ ಶ್ರೀಮಂತರ ಅತಿಕ್ರಮಣವನ್ನು ಬುಲ್ಡೋಜರ್ ತಂದು ಕೆಡವಿ: ಎಚ್.ಡಿ.ಕುಮಾರಸ್ವಾಮಿ

Prasthutha|

ಮೈಸೂರು: ಬಡವರ ಮೇಲೆ ಮಾತ್ರ ಅಧಿಕಾರಿಗಳು ಪ್ರತಾಪ ತೋರುತ್ತಾರೆ, ಶ್ರೀಮಂತರ ಮೇಲಲ್ಲ. ಬಡವರ ಆಸ್ತಿಯನ್ನು ಬುಲ್ಡೋಜರ್ ನಿಂದ ಒಡೆದು ಹಾಕಿ ಏನು ಮಾಡುತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -


ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಯಾರು ಎಷ್ಟು ಅತಿಕ್ರಮಣ ಮಾಡಿಕೊಂಡಿದ್ದಾರೆ ಅನ್ನುವ ಪಟ್ಟಿಯನ್ನು ದಾಖಲೆ ಸಮೇತ ಕೊಡ್ತೀನಿ. ಅಂತಹವರ ಆಸ್ತಿಯನ್ನು ಬುಲ್ಡೋಜರ್ ನಿಂದ ಕೆಡವಲು ಸಾಧ್ಯವಾಗುತ್ತಾ ಎಂದು ಸವಾಲು ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಲವು ಅವಕಾಶವಿದೆ. ನಿಜವಾಗಲೂ ಆಸಕ್ತಿ ಇದ್ದರೆ ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.


ಯಾರೋ ಬಡವ ಫುಟ್ಪಾತ್ ಮೇಲೆ ಅಂಗಡಿ ಇಟ್ಟುಕೊಂಡಿರುತ್ತಾನೆ. ನಮ್ಮ ಅಧಿಕಾರಿಗಳು ಅದನ್ನು ಜೆಸಿಬಿ ತಂದು ಹೊಡೆದು ಹಾಕ್ತಾರೆ. ಅದೇ ಶ್ರೀಮಂತರು ಎಷ್ಟೇ ಅಕ್ರಮ ಮಾಡಿದ್ದರೂ ಕ್ರಮ ವಹಿಸಲ್ಲ. ಇದು ನಿಮ್ಮ ಸರ್ಕಾರದ ನಡೆಯೇ ಎಂದು ಪ್ರಶ್ನಿಸಿದ್ದಾರೆ.

Join Whatsapp