‘ಇನ್ನು ಮುಂದೆ ಮದ್ಯ ಸೇವಿಸಿ ವಾಹನ ಚಲಾಯಿಸುವುದಿಲ್ಲ’ ಎಂದು ಸಾವಿರ ಬಾರಿ ಬರೆಸಿದ ಪೊಲೀಸರು

Prasthutha|

ತಿರುವನಂತಪುರಂ: ಪಾನಮತ್ತರಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ 16 ಮಂದಿ ಬಸ್ ಚಾಲಕರಿಗೆ “ನಾವು ಮತ್ತೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದಿಲ್ಲ” ಎಂದು 1 ಸಾವಿರ ಬಾರಿ ಬರೆಸಿರುವ ಘಟನೆ ನಡೆದಿದೆ.

- Advertisement -

ತೃಪ್ಪುಣಿತ್ರ ಬೆಟ್ಟದ ಅರಮನೆ ಠಾಣಾ ಇನ್​ ಸ್ಪೆಕ್ಟರ್​​ ವಿ.ಗೋಪಕುಮಾರ್ ಅವರು ಇಂದು ಬೆಳಗಿನ ಜಾವ 5 ಗಂಟೆಯಿಂದ 9 ಗಂಟೆಯವರೆಗೆ ಪಾನಮತ್ತ ಚಾಲಕರ  ಶೋಧ ನಡೆಸಿದರು. ಪರಿಶೀಲನೆಯಲ್ಲಿ ಇಬ್ಬರು ಕೆಎಸ್‌’ಆರ್‌’ಟಿಸಿ ಬಸ್ ಚಾಲಕರು, 10 ಖಾಸಗಿ ಬಸ್ ಚಾಲಕರು ಮತ್ತು 4 ಶಾಲಾ ಬಸ್ ಚಾಲಕರು ಪಾನಮತ್ತರಾಗಿರುವುದು ಬೆಳಕಿಗೆ ಬಂದಿದೆ.

ಸಿಕ್ಕಿಬಿದ್ದ ಚಾಲಕರಿಂದ 1000 ಬಾರಿ ಮತ್ತೊಮ್ಮೆ ತಪ್ಪು ಮಾಡುವುದಿಲ್ಲ ಎಂದು ಬರೆಸಿದ ಬಳಿಕ ಚಾಲಕರಿಗೆ ಜಾಮೀನು ನೀಡಲಾಯಿತು. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕರು ನೆಲದ ಮೇಲೆ ಕುಳಿತು ಬರೆಯುತ್ತಿರುವುದನ್ನು ಕಾಣಬಹುದು.

- Advertisement -

ಕಾರ್ಯಾಚರಣೆ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪೊಲೀಸರು ಮತ್ತೊಂದು ಬಸ್​ ವ್ಯವಸ್ಥೆ ಮಾಡಿ ಕಳುಹಿಸಿದರು. ಶಾಲಾ ಬಸ್‌ನಲ್ಲಿದ್ದ ಮಕ್ಕಳನ್ನು ಪೊಲೀಸ್ ಇಲಾಖೆಯ ಮತ್ತೊಂದು ಬಸ್‌’ಗೆ ಸ್ಥಳಾಂತರಿಸಲಾಯಿತು. ಸಿಕ್ಕಿಬಿದ್ದ ಇಬ್ಬರು ಚಾಲಕರ ಬಗ್ಗೆ ಕೆಎಸ್‌ಆರ್‌’ಟಿಸಿಗೆ ವಿಶೇಷ ವರದಿ ಹೋಗಲಿದೆ.

ಘಟನೆಯ ಬಗ್ಗೆ ತಹಸೀಲ್ದಾರ್​​ ವಿ.ಗೋಪಕುಮಾರ್ ಮಾತನಾಡಿ, ಕೃತ್ಯದಲ್ಲಿ ಸಿಕ್ಕಿಬಿದ್ದ ಚಾಲಕರ ಪರವಾನಗಿ ರದ್ದುಪಡಿಸಲು ಇಲಾಖೆ ಮುಂದಾಗಿದೆ ಎಂದರು.

Join Whatsapp