ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿ ಆತ್ಮಹತ್ಯೆ!

Prasthutha|

ಹೈದರಾಬಾದ್: ಸೈದಾಬಾದ್ ನಲ್ಲಿ 6 ವರ್ಷದ ಬಾಲಕಿಯ ಮೇಲೆ ನಡೆದ ಅಮಾನವೀಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ರುವಾರಿ ಪಲ್ಲಕೊಂಡ ರಾಜು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆತನ ಶವ ರೈಲ್ವೇ ಹಳಿಗಳ ಮೇಲೆ ಪತ್ತೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

- Advertisement -

ಸೆಪ್ಟೆಂಬರ್ 9 ರಂದು ಸೈದಾಬಾದ್ ನ ಸಿಂಗರೇಣಿ ಕಾಲೋನಿಯಲ್ಲಿ ತನ್ನ ನೆರೆಮನೆಯ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದನು. ಸಂತ್ರಸ್ತ ಬಾಲಕಿಯ ಶವ ಮಧ್ಯರಾತ್ರಿ ವೇಳೆಯಲ್ಲಿ ಆತನ ಮನೆಯಿಂದ ಪತ್ತೆ ಹಚ್ಚಲಾಗಿತ್ತು. ಪುಟ್ಟ ಬಾಲಕಿಯ ಮೇಲೆ ಇ ದುಷ್ಕೃತ್ಯವೆಸಗಿದ ರಾಜು ಘಟನೆಯ ನಂತರ ತಲೆಮರೆಸಿಕೊಂಡಿದ್ದನು.

ಈ ಭೀಕರ ಘಟನೆಯ ಸಂಬಂಧಿಸಿದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದರು. ಘಟನೆ ನಡೆದು ಅಪರಾಧಿಯನ್ನು ಪತ್ತೆಹಚ್ಚಲು ವಿಫಲವಾದ ಪೊಲೀಸ್ ಇಲಾಖೆಯ ವಿರುದ್ಧ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಆತನ ಬಗ್ಗೆ ಮಾಹಿತಿಗಾಗಿ 10 ಲಕ್ಷ ನಗದನ್ನು ಘೋಷಿಸಲಾಗಿತ್ತು.

- Advertisement -

ಈ ಮಧ್ಯೆ ನಿನ್ನೆ ತೆಲಂಗಾಣದ ಕಾರ್ಮಿಕ ಮತ್ತು ಉದ್ಯೋಗವಕಾಶ ಸಚಿವ ಮಲ್ಲಾ ರೆಡ್ಡಿ ಅತ್ಯಾಚಾರ ಅರೋಪಿಯನ್ನು ಹಿಡಿದು ಎನ್ಕೌಂಟರ್ ನಡೆಸಲಾಗುವುದು ಎಂದು ತಿಳಿಸಿದ್ದರು.

ಪ್ರಸಕ್ತ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Join Whatsapp