ಮಸೀದಿಗೆ ಬಾಣ ಬಿಟ್ಟಂತೆ ಸನ್ನೆ: ಕ್ಷಮೆಯಾಚಿಸಿದ ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ

Prasthutha|

ಹೊಸದಿಲ್ಲಿ: ರಾಮ ನವಮಿ ಮೆರವಣಿಗೆಯಲ್ಲಿ ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮಸೀದಿಗೆ ಬಾಣ ಬಿಟ್ಟಂತೆ ಸನ್ನೆಯ ಮೂಲಕ ಸೂಚಿಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಈ ಕುರಿತು ಕ್ಷಮೆಯನ್ನು ಯಾಚಿಸಿದ್ದಾರೆ.

- Advertisement -


ಋಣಾತ್ಮಕತೆಯನ್ನು ಹರಡಲು ನನ್ನ ಒಂದು ವೀಡಿಯೋ ಬಳಸಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದು ಅಪೂರ್ಣ ವೀಡಿಯೋ ಎಂದು ಸ್ಪಷ್ಟೀಕರಣ ನೀಡಲು ಬಯಸುತ್ತೇನೆ. ಅದರಿಂದ ಭಾವನೆಗಳಿಗೆ ನೋವುಂಟಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಏಕೆಂದರೆ ನಾನು ಎಲ್ಲರನ್ನೂ ಗೌರವಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ನಗರದ ಹಳೆಯ ಭಾಗದ ಸಿದ್ದಿಯಂಬೆರ್ ಬಜಾರ್ ಜಂಕ್ಷನ್ನಲ್ಲಿ ರಾಮ ನವಮಿ ಮೆರವಣಿಗೆಯಲ್ಲಿ ಭಾಗವಹಿಸುವ ವೇಳೆ ತೆರೆದ ವಾಹನದಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿತ್ತು. ಈ ಮೆರವಣಿಗೆಯನ್ನು ಬಿಜೆಪಿ ಶಾಸಕ ರಾಜಾ ಸಿಂಗ್ ಆಯೋಜಿಸಿದ್ದರು.

Join Whatsapp