ಸೆಗಣಿ ಎರಚಿ ದೀಪಾವಳಿ ಆಚರಿಸಿದ ಗ್ರಾಮಸ್ಥರು!

Prasthutha|

►ಕರ್ನಾಟಕದ ‘ಗೋಮಾತಾ ಪುರ’ದ ಬಗ್ಗೆ ನಿಮಗೆ ಗೊತ್ತೇ?

- Advertisement -

ಬೆಂಗಳೂರು: ಇಡೀ ದೇಶವೇ ದೀಪಾವಳಿಯನ್ನು ದೀಪ, ಪಟಾಕಿ, ಮೇಣದ ಬತ್ತಿಗಳನ್ನು ಹಚ್ಚಿ ಸಂಭ್ರಮಿಸುತ್ತಿರುವಂತೆಯೇ ಕರ್ನಾಟಕದ ಗ್ರಾಮವೊಂದರ ಜನರು ಈ ಹಬ್ಬವನ್ನು ವಿಚಿತ್ರ ರೀತಿಯಲ್ಲಿ ಆಚರಿಸಿದ್ದಾರೆ.

ಪ್ರತೀ ವರ್ಷವೂ ಪರಸ್ಪರ ಒಬ್ಬರಿಗೊಬ್ಬರು ಸಗಣಿ ಎರಚುತ್ತಾ ಸಗಣಿ ಸ್ನಾನ ಮಾಡಿ ಇಲ್ಲಿನ ಗ್ರಾಮಸ್ಥರು ಹಬ್ಬ ಆಚರಿಸುತ್ತಾರೆ.
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ‘ಗೋಮಾತಾ ಪುರ’ ಎಂಬ ಗ್ರಾಮಸ್ಥರು ದೀಪಾವಳಿಯನ್ನು ವಿಚಿತ್ರ ಸಂಪ್ರದಾಯದೊಂದಿಗೆ ಆಚರಿಸುತ್ತಿದ್ದಾರೆ.
ಈ ಸ್ಥಳೀಯ ಪದ್ಧತಿಯನ್ನು ‘ಗೊರೆಹಬ್ಬ’ ಎಂದು ಕರೆಯಲಾಗುತ್ತದೆ.

- Advertisement -

ಗೋವುಗಳಿರುವ ಮನೆಗಳಿಂದ ಸಂಗ್ರಹಿಸುವ ಸೆಗಣಿಯನ್ನು ಗ್ರಾಮಸ್ಥರೆಲ್ಲಾ ಸೇರಿಕೊಂಡು ಬಯಲು ಪ್ರದೇಶದಲ್ಲಿ ಸಂಗ್ರಹಿಸುತ್ತಾರೆ.
ದೀಪಾವಳಿಯ ಮುಕ್ತಾಯದ ದಿನದಂದು ಗೊರೆಹಬ್ಬದಲ್ಲಿ ಭಾಗವಹಿಸಲು ಗ್ರಾಮಸ್ಥರೆಲ್ಲಾ ಇಲ್ಲಿ ಸೇರುತ್ತಾರೆ. ಇಲ್ಲಿ ಒಬ್ಬರಿಗೊಬ್ಬರು ಸಗಣಿ ಎರಚುತ್ತಾ ಕೊನೆಗೆ ಸಗಣಿಯಲ್ಲೇ ಸ್ನಾನ ಮಾಡಿ ಹಿಂತಿರುಗುತ್ತಾರೆ.

ಈ ವಿಚಿತ್ರ ಆಚರಣೆಗೆ ಗ್ರಾಮಸ್ಥರು ನೀಡುವ ಕಾರಣವೆಂದರೆ ತಮ್ಮ ದೇವರು ಬೀರೇಶ್ವರ ಸ್ವಾಮಿಯು ಹಸುವಿನ ಸಗಣಿಯಿಂದ ಜನಿಸಿದ್ದಾನೆ ಎಂದಾಗಿದೆ. ಸಗಣಿ ಎರಚುವುದರೊಂದಿಗೆ ಮಾರಕ ರೋಗಗಳು ವಾಸಿಯಾಗುತ್ತದೆ ಎಂದೂ ಗ್ರಾಮವಾಸಿಗಳು ಹೇಳುತ್ತಾರೆ.

Join Whatsapp