ಈ ಕೊಲೆಗಡುಕ ರಾಜ್ಯ ಸರ್ಕಾರಕ್ಕೆ ಇನ್ನೆಷ್ಟು ಜನರ ಪ್ರಾಣ ಬೇಕೋ: ಸುರ್ಜೇವಾಲಾ ಕಿಡಿ

Prasthutha|

ಬೆಂಗಳೂರು: ಈ ಕೊಲೆಗಡುಕ ಸರ್ಕಾರಕ್ಕೆ ಇನ್ನೆಷ್ಟು ಜನರ ಪ್ರಾಣ ಬೇಕೋ! ಒಂದು ಕುಟುಂಬವೇ ಈ ಸರ್ಕಾರದ ಲಂಚ ಬಾಕತನಕ್ಕೆ ಬೇಸತ್ತು ದಯಾಮರಣಕ್ಕೆ ಪತ್ರ ಬರೆದಿದ್ದಾರೆಂದರೆ ಇದೆಂಥ ಮಾನಗೆಟ್ಟ ನರಹಂತಕ ಸರ್ಕಾರವಿರಬೇಕು! ಇನ್ನೆಷ್ಟು ಸಂತೋಷ ಪಾಟೀಲ್ ನಂಥವರು ಈ ಸರ್ಕಾರದ ಲಂಚಬಾಕ ಮೃಗಗಳಿಗೆ ಬಲಿಯಾಗಬೇಕು? ರೀ ಪ್ರಧಾನಿಗಳೇ ನೋಡಿ ನಿಮ್ಮ 40% ಸರ್ಕಾರದ ಅಸಹ್ಯವನ್ನ! ಎಂದು ಕಾಂಗ್ರೆಸ್ ಉಸ್ತುವಾರಿ, ರಾಜ್ಯಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿಕಾರಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಳಿಯ ಕುಗ್ವೆ ಗ್ರಾಮದಲ್ಲಿ ಶ್ರೀಕಾಂತ್ ಮತ್ತು ಸುಜಾತಾ ನಾಯಕ್ ಎಂಬ ದಂಪತಿ ನಮಗೆ ನ್ಯಾಯ ಕೊಡಿಸಿ, ಇಲ್ಲವೇ ದಯಾಮರಣಕ್ಕೆ ಒಪ್ಪಿಗೆ ಕೊಡಿ ಎಂದು ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಿರುವ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.

Join Whatsapp