ಗೃಹ ಸಚಿವ ಅಮಿತ್ ಶಾ ಚಪ್ಪಲಿ ಕೈಯಲ್ಲಿ ಎತ್ತಿ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ !

Prasthutha|

ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಪ್ಪಲಿಯನ್ನು ಬಿಜೆಪಿ ತೆಲಂಗಾಣ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಕೈಯಲ್ಲಿ ಎತ್ತಿ ಶಾ ಅವರ ಕಾಲಿನ ಬಳಿ ಇಟ್ಟ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಕೀಯ ನಾಯಕರು ಈ ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗುಲಾಮಗಿರಿ ಮನಸ್ಥಿತಿ ಬಿಜೆಪಿಯಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂದು ಕಿಡಿಕಾರಿದ್ದಾರೆ.

- Advertisement -

ತೆಲಂಗಾಣಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ನಿನ್ನೆ ಹೈದರಾಬಾದರ್ ಉಜ್ಜೈಯಿನಿ ಮಹಾಕಾಳಿ ದೇವಸ್ಥಾನಕ್ಕೆ ಆಗಮಿಸಿದ್ದರು. ಪೂಜೆ ಮುಗಿಸಿ ಹೊರಬಂದ ಅಮಿತ್ ಶಾ ಅವರ ಹಿಂದೆಯೇ ಓಡೋಡಿ ಬಂದ ಸಂಜಯ್ ಕುಮಾರ್ ಅವರು ಶಾ ಅವರ ಚಪ್ಪಲಿಯನ್ನು ಕೈಯಲ್ಲಿ ಎತ್ತಿ ಹಿಡಿದು ಗೃಹ ಸಚಿವರ ಪಾದದ ಬಳಿ ಇಟ್ಟಿದ್ದಾರೆ. ಅದನ್ನು ಯಾವುದೇ ಮುಜುಗರವಿಲ್ಲದೆ ಅಮಿತ್ ಶಾ ಧರಿಸುತ್ತಿರುವುದು ವೀಡಿಯೋದಲ್ಲಿದೆ.

ಇದು ಬಿಜೆಪಿಯಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಶ್ರೇಣೀಕೃತ ವ್ಯವಸ್ಥೆಯ ಪ್ರತಿರೂಪ ಎಂದು ವಿಪಕ್ಷಗಳು ಕಿಡಿಕಾರಿವೆ.

- Advertisement -

ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಗೃಹ ಸಚಿವರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಹರಿಹಾಯ್ದಿದ್ದಾರೆ.

Join Whatsapp