ಒಂದೇ ಮಗುವನ್ನು ಹೆರುವ ಹಿಂದೂ ಮಹಿಳೆಯರು ಅಪಾಯಕಾರಿ ಸರ್ಪಗಳು: ಮತ್ತೆ ನಾಲಗೆ ಹರಿಯಬಿಟ್ಟ ಯತಿ ನರಸಿಂಹಾನಂದ

Prasthutha|

ಲಕ್ನೋ: ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇವಲ ಒಂದೇ ಮಗುವನ್ನು ಹೆರುವ ಹಿಂದೂ ಮಹಿಳೆಯರು ಅಪಾಯಕಾರಿ ಸರ್ಪಗಳು ಎಂದು ಕರೆದ ಯತಿ ನರಸಿಂಹಾನಂದ ಮತ್ತೆ ತನ್ನ ನಾಲಗೆಯನ್ನು ಹರಿಯಬಿಟ್ಟಿದ್ದಾರೆ.
ಇತ್ತೀಚೆಗೆ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದ ಇವರು ಸಾಕಷ್ಟು ಟೀಕೆಗೊಳಗಾಗಿದ್ದರು.

- Advertisement -

ಒಂದೇ ಮಗುವಿಗೆ ಜನ್ಮ ಕೊಟ್ಟ ಪೋಷಕರನ್ನು ರಾಕ್ಷಸರೆಂದು ಜರಿದ ಯತಿ ನರಸಿಂಹಾನಂದ, ಒಬ್ಬನೇ ಮಗನಿಗೆ ಜನ್ಮ ನೀಡಿದ ಮಹಿಳೆ ಅಪೂರ್ಣವಾಗಿದ್ದಾಳೆ, ಅವಳು ಅಪಾಯಕಾರಿ ಸರ್ಪದಂತೆ ಸ್ವಂತ ಮಗನ ಸಾವಿಗೆ ಕಾರಣವಾಗುತ್ತಾಳೆ ಎಂದು ಹೇಳಿಕೆ ನೀಡುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯತಿ ನರಸಿಂಹಾನಂದ ಮಹಿಳೆಯರ ವಿರುದ್ಧ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ವಿರುದ್ಧ ಅಸಹ್ಯಕರ ಮತ್ತು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಹಲವಾರು ಕಾರ್ಯಕ್ರಮದಲ್ಲಿ ಅವರು ರಾಜಕಾರಣಿಗಳು ಸೇರಿದಂತೆ ಮಹಿಳೆಯರನ್ನು ಪದೇ ಪದೇ ಆಕ್ಷೇಪಿಸಿದ್ದಾನೆ.

Join Whatsapp