ಕೇಸರಿ ಧರಿಸಿದ್ದು ಹಿಂದೂ ವಿದ್ಯಾರ್ಥಿಗಳು ಅಮಾನತ್ತು ಆದದ್ದು ಮುಸ್ಲಿಮರು | ಪತ್ರಕರ್ತರ ಮೇಲೆ ಹಲ್ಲೆ ಎಂದು ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳು.

Prasthutha|

ಪುತ್ತೂರು : ತಣ್ಣಗಾದ ಹಿಜಾಬ್ ವಿಚಾರವನ್ನು ಕೇಸರಿ ಧರಿಸಿ ಬಂದು ಮತ್ತೇ ವಿವಾದವನ್ನಾಗಿ ಮಾಡಿದ ಹಿಂದೂ ವಿದ್ಯಾರ್ಥಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ಮತ್ತು ಪತ್ರಕರ್ತನಿಗೆ ಹಲ್ಲೆ ಎಂದು‌ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

- Advertisement -

ಕಾಲೇಜ್ ಆವರಣಕ್ಕೆ ಅಕಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರನ್ನು ಚಿತ್ರೀಕರಣ ಮಾಡಿದ ಪತ್ರಕರ್ತನನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ ಹೊರತು ಯಾವುದೇ ರೀತಿಯ ಹಲ್ಲೆಗೈದಿಲ್ಲ ಎಂದು ತಿಳಿದು ಬಂದಿದೆ.
ಇದು ಕಾಲೇಜು ಪ್ರಾಂಶುಪಾಲರ ಸಮ್ಮುಖದಲ್ಲೇ ನಡೆದಿದ್ದು ಅವರ ಉಪಸ್ಥಿತಿಯಲ್ಲೇ ವೀಡಿಯೋ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

ಕಾಲೇಜು ಆವರಣದಲ್ಲಿ ವರದಿ ಮಾಡಲಷ್ಟೇ ಅನುಮತಿ ನೀಡಿದ್ದು ಚಿತ್ರೀಕರಣ ಮಾಡಲು ಅವಕಾಶ ನೀಡಿಲ್ಲ ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ.
ಅದನ್ನೇ ವಿದ್ಯಾರ್ಥಿಗಳು ಪ್ರಶ್ನಿಸಿದ್ದು ಪತ್ರಕರ್ತರ ಮೇಲೆ ಹಲ್ಲೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡಲಾಗಿದೆ.

Join Whatsapp