ದೇಶದಲ್ಲಿ ಹಿಜಾಬ್ ಜಿಹಾದ್ ಆಗಿ ಮಾರ್ಪಟ್ಟಿದೆ । ನಾಲಗೆ ಹರಿಬಿಟ್ಟ ವಿ.ಎಚ್.ಪಿ ನಾಯಕ

Prasthutha|

ನವದೆಹಲಿ: ಹಿಜಾಬ್ ಕುರಿತು ವಿಶ್ವ ಹಿಂದೂ ಪರಿಷತ್ ಜಂಟಿ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ದೇಶದಲ್ಲಿ ಹಿಜಾಬ್ ಜಿಹಾದ್ ಆಗಿ ಮಾರ್ಪಟ್ಟಿದೆ ಎಂದು ಹೇಳುವ ಮೂಲಕ ತನ್ನ ನಾಲಗೆಯನ್ನು ಹರಿ ಬಿಟ್ಟಿದ್ದಾನೆ.

- Advertisement -

ಈ ಹಿಂದೆಯೂ ಕೂಡ ಬಲಪಂಥೀಯ ಕಾರ್ಯಕರ್ತರು ಜಿಹಾದ್ ಎಂಬ ಪದಬಳಕೆ ಮಾಡಿ ದೇಶದಲ್ಲಿ ಅಶಾಂತಿ ಸೃಷ್ಟಿಸಿರುವುದು ಬಹಿರಂಗವಾಗಿತ್ತು.

ಇತ್ತೀಚೆಗೆ ಕರ್ನಾಟಕದಲ್ಲಿ ತಲೆದೋರಿರುವ ಸ್ಕಾರ್ಫ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿ.ಎಚ್. ಪಿ ನಾಯಕ ಜೈನ್, ಮುಸ್ಲಿಮ್ ಮಹಿಳೆಯರನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಚಿತ್ರಕಾರಿ ಹೇಳಿಕೆ ನೀಡಿದ್ದಾನೆ.

- Advertisement -

ದೆಹಲಿ ನಡೆದ ಶಾಹಿನ್ ಬಾಗ್ ಹೋರಾಟ ಮಾದರಿಯಲ್ಲಿ ಹಿಜಾಬ್ ಪರ ಪ್ರತಿಭಟನೆಗೆ ಮುಸ್ಲಿಮರು ಮುಂದಾಗುತ್ತಿದ್ದು, ಇದಕ್ಕೆ ವಿಶ್ವ ಹಿಂದೂ ಪರಿಷತ್ ಅವಕಾಶ ನೀಡುವುದಿಲ್ಲ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾನೆ.

ಈ ಮಧ್ಯೆ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಗೆ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.

Join Whatsapp