ಅಪಘಾತವನ್ನು ಆಹ್ವಾನಿಸುತ್ತಿದೆ ಹೆದ್ದಾರಿ ರಸ್ತೆ ಗುಂಡಿ !

Prasthutha|

ಕೊಡ್ಲಮೊಗರು:  ಆನೆಕಲ್ಲು-ಹೊಸಂಗಡಿ ರಾಜ್ಯ ಹೆದ್ದಾರಿಯ ಪಲ್ಲೆದಪಡ್ಪು ಎಂಬಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ತಿರುವಿನ ಮೋರಿ ಕುಸಿದು ಮರಣ ಗುಂಡಿ ನಿರ್ಮಾಣಗೊಂಡು ತಿಂಗಳು ಕಳೆದಿದ್ದರೂ ಅದನ್ನು ಸರಿಪಡಿಸುವಲ್ಲಿ ಸಂಬಂಧಪಟ್ಟ ಇಲಾಖೆ ಆಸಕ್ತಿ ತೋರಿಲ್ಲ.

- Advertisement -

ಹಲವಾರು ವಾಹನಗಳು ಈಗಾಗಲೇ ಗುಂಡಿಗೆ ಬಿದ್ದು ಅಪಘಾತಗಳು ಸಂಭವಿಸಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಾಗಲೀ ಇತ್ತ ತಲೆ ಹಾಕಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವು ದೊಡ್ಡ ಅಪಘಾತಗಳಿಗೆ, ಸಾವು ನೋವುಗಳಿಗೆ ಕಾರಣವಾಗಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Join Whatsapp