ವಿರಾಜಪೇಟೆ | ಹೃದಯ ತಪಾಸಣಾ ಶಿಬಿರಕ್ಕೆ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಚಾಲನೆ

Prasthutha|

ವಿರಾಜಪೇಟೆ: ವಿರಾಜಪೇಟೆ ತಾಲೂಕಿನಲ್ಲಿ ಹೃದಯ ತಪಾಸಣಾ ಶಿಬಿರಕ್ಕೆ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಚಾಲನೆ ನೀಡಿದರು. ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆ ಹಾಗೂ ಮೈಸೂರು ಅಪೋಲೋ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

- Advertisement -

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಈ ಪ್ರದೇಶದಲ್ಲಿ ಹಲವರು ಮಂದಿ ಕಡು ಬಡವರಿದ್ದು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಮೈಸೂರಿಗೆ ತೆರಳಬೇಕಿದೆ, ಆದರೆ ತುರ್ತು ಸಮಯದಲ್ಲಿ ಪ್ರಯಾಣಿಸಲು ಕಷ್ಟವಾದುದರಿಂದ ಇಲ್ಲೇ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.

ಹೃದಯ ತಪಾಸಣಾ ಶಿಬಿರವು ಪ್ರತಿ ತಿಂಗಳ ಎರಡನೇ ಶುಕ್ರವಾರ ಮತ್ತು ನಾಲ್ಕನೇ ಶುಕ್ರವಾರ ಸಾರ್ವಜನಿಕರಿಗೆ ಉಚಿತವಾಗಿ ನಡೆಯಲಿದೆ ಎಂದು ವಿರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಡಾ. ವಿಶ್ವನಾಥ ಸಿಂಪಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅಪೋಲೋ ಆಸ್ಪತ್ರೆಯ ವೈದ್ಯರಾದ ಡಾ.ಪ್ರಸಿನ್, ಡಾ.ಮಹಮ್ಮದ್ ಅಲಿ, ಆಯೋಜಕ ರಾಕೇಶ್ ಉತ್ತಪ್ಪ ಹಾಗೂ ಪಟ್ಟಣ ಪಂಚಾಯತಿ ಅದ್ಯಕ್ಷೆ ಸುಶ್ಮಿತ ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.

Join Whatsapp