ತೆಂಗಿನಕಾಯಿ ಕೀಳುವ ವೇಳೆ ಹೃದಯಾಘಾತ| ಮರದಿಂದ ಬಿದ್ದು ಕಾರ್ಮಿಕ ಮೃತ್ಯು

Prasthutha|

ಕಾಸರಗೋಡು: ತೆಂಗಿನಕಾಯಿ ಕೀಳುವ ವೇಳೆ ಹೃದಯಾಘಾತವಾಗಿ ಮರದಿಂದ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

- Advertisement -

ಮೃತರನ್ನು ಉಳ್ಳಾಲ ತಾಲೂಕಿನ ಮುಡಿಪು ಸಮೀದ ಮಂಚಿ ಮೂಲದ ಪ್ರಸ್ತುತ ಕೇರಳದ ಬಂದಿಯೋಡಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಹಮೀದ್ (52) ಎಂದು ಗುರುತಿಸಲಾಗಿದೆ.

ಹಮೀದ್ ಅವರು ಇಚ್ಚಿಲಂಗೋಡ್‌ನ ವ್ಯಕ್ತಿಯೊಬ್ಬರ ಹೊಲದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಹೃದಯಾಘಾತವಾಗಿ ತೆಂಗಿನ ಮರದಿಂದ ಬಿದ್ದಿದ್ದಾರೆ.

- Advertisement -

ತಕ್ಷಣ ಅವರನ್ನು ಬಂದಿಯೋಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಅವರು ಪತ್ನಿ ಖದೀಜಾ, ಮಕ್ಕಳಾದ ಹುನೈಶಿ, ಉಮೀರಾ, ಹುಬೈದ್, ಹುಝೈಫ್ ಹುದಾ ಮತ್ತು ಅಝ್ಮಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Join Whatsapp