ಉದ್ಧವ್, ಆದಿತ್ಯ, ರಾವುತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಕೋರಿದ್ದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ಸಾರ್ವಜನಿಕರ ಶಾಂತಿ ಕದಡಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಮಗ ಆದಿತ್ಯ ಠಾಕ್ರೆ, ಶಿವಸೇನೆ ಸಂಸದ ಸಂಜಯ್ ರಾವುತ್ ವಿರುದ್ಧ ದೇಶದ್ರೋಹದ ಎಫ್ ಐಆರ್ ದಾಖಲಿಸುವಂತೆ ಬಾಂಬೆ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿದೆ.

- Advertisement -

ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಂಕರ್ ದತ್ತ ಹಾಗೂ ಜಸ್ಟಿಸ್ ಮಕರಂದ್ ಎಸ್. ಕಾರ್ಣಿಕ್ ಅವರಿದ್ದ ಪೀಠವು ಇಂದೇ ಕೈಗೆತ್ತಿಕೊಂಡು ಅರ್ಜಿಯನ್ನು ವಜಾ ಮಾಡಿತು.

ಹೇಮಂತ ಬಾಬುರಾವ್ ಪಾಟೀಲ್ ಎಂಬ ಪುಣೆ ನಿವಾಸಿ ಈ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಪಾಟೀಲ್ ಪರ ಹಾಜರಾದ ವಕೀಲ ಆರ್. ಎನ್. ಕಚವೆ ಅವರು ಶಿವಸೇನೆಯ ನಾಯಕರಾದ ಉದ್ಧವ್, ಆದಿತ್ಯ, ರಾವುತ್ ರ ಜೀವ ಬೆದರಿಕೆಯಿಂದಾಗಿ ಬಂಡಾಯ  ಶಾಸಕರು ಅಸ್ಸಾಮಿಗೆ ಹೋಗಬೇಕಾಯಿತು ಎಂದು ವಾದಿಸಿದರು.

- Advertisement -

ಹುರುಳಿಲ್ಲದ ಸಮಯ ಕೊಲ್ಲುವ ಪಿಐಎಲ್ ಎಂದು ಕೋರ್ಟು ಅಭಿಪ್ರಾಯ ಪಟ್ಟಿತು. ಆದರೆ ಅರ್ಜಿದಾರರು ಖಾಸಗಿ ದೂರಾಗಿ ಇದನ್ನು ಮ್ಯಾಜಿಸ್ಟ್ರೇಟರೆದುರು ಇಡಬಹುದು ಎಂದೂ ಹೈಕೋರ್ಟು ಹೇಳಿತು.

Join Whatsapp