ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆ ಕಿಡ್ನಾಪ್ !

Prasthutha|

ಹಾವೇರಿ: ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನು ಡಿ. 14 ರಂದು ಕಿಡ್ನಾಪ್ ಮಾಡಿ ಶುಕ್ರವಾರ ರಾತ್ರಿ ಬಿಡುಗಡೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡದಲ್ಲಿ ನಡೆದಿದೆ.

- Advertisement -

ದೇವಕ್ಕ ಅಪಹರಣಕ್ಕೊಳಗಾದ  ವೃದ್ಧೆ ಎಂದು ಗುರುತಿಸಲಾಗಿದೆ.

ಡಿಸೆಂಬರ್ 14, 2021ರಂದು ಏಳು ಎಕರೆ ಆಸ್ತಿಗಾಗಿ ಐವರು ಸಂಬಂಧಿಕರು ವೃದ್ಧೆಯನ್ನು ಅಪಹರಣ ಮಾಡಲಾಗಿತ್ತು. ವೃದ್ಧೆಗೆ ಮಕ್ಕಳು  ಇಲ್ಲದ್ದರಿಂದ ಮಾಣಿಕಪ್ಪ ದುಂಡಣ್ಣನವರ ಎಂಬುವರಿಗೆ ವೃದ್ಧೆ ತನ್ನೆಲ್ಲಾ ಆಸ್ತಿಯನ್ನು ಬರೆದು ಕೊಟ್ಟಿದ್ದರು. ಮಾಣಿಕಪ್ಪ ಕುಟುಂಬಸ್ಥರು ಹಲವು ವರ್ಷಗಳಿಂದ ವೃದ್ಧೆಯನ್ನು ಆರೈಕೆ ಮಾಡಿಕೊಂಡು ಬಂದಿದ್ದರು. ಆದರೆ ವೃದ್ದೆಯ ಸಂಬಂಧಿಕರಾಗಿರುವ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರು ವೃದ್ಧೆಯನ್ನು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾಗಿದೆ.

- Advertisement -

ಅಪಹರಣಕ್ಕೀಡಾದ ವೃದ್ಧೆ ಸದ್ಯ ಹಾನಗಲ್ ಪೊಲೀಸ್ ಠಾಣೆಯಲ್ಲಿದ್ದಾರೆ.

Join Whatsapp