ದ್ವೇಷ ಭಾಷಣ । ಕಾಳಿ ಚರಣ್ ಮಹಾರಾಜ್’ಗೆ ಹೈಕೋರ್ಟ್ ಜಾಮೀನು

Prasthutha|

ರಾಯ್ ಪುರ: ಮಹಾತ್ಮ ಗಾಂಧೀಜಿ ವಿರುದ್ಧದ ದ್ವೇಷ ಭಾಷಣ ಹಿನ್ನೆಲೆಯಲ್ಲಿ ಬಂಧಿತರಾದ ಕಾಳಿ ಚರಣ್ ಮಹಾರಾಜ್’ಗೆ ಛತ್ತೀಸ್ ಗಢ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

- Advertisement -

ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅರವಿಂದ್ ಸಿಂಗ್ ಚಾಂದೆಲ್ ಅವರ ಏಕ ಸದಸ್ಯ ಪೀಠ, ಕಾಳಿ ಚರಣ್ ಮಹಾರಾಜ್’ಗೆ ಜಾಮೀನು ಮಂಜೂರು ಮಾಡಿದೆ ಎಂದು ಆರೋಪಿ ಪರ ವಕೀಲ ಕಿಶೋರ್ ಬದೌರಿ ತಿಳಿಸಿದ್ದಾರೆ.

ಈ ಮಧ್ಯೆ ಇಬ್ಬರು ಶ್ಯೂರಿಟಿ ಸೇರಿದಂತೆ ತಲಾ 50000 ರೂ. ದಂತೆ 1 ಲಕ್ಷ ಮೌಲ್ಯದ ಬಾಂಡ್ ಒದಗಿಸಿದ ಬಳಿಕ ಬಿಡುಗಡೆಗೊಳಿಸಲಾಗುವುದೆಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

- Advertisement -

ಸರ್ಕಾರದ ಪರ ವಕಾಲತ್ ವಹಿಸಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Join Whatsapp