ಮದರಸಾಗಳ ವಿರುದ್ಧ ನಾಲಗೆ ಹರಿಯಬಿಟ್ಟ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ

Prasthutha|

ಮಂಗಳೂರು: ಮದರಸಾಗಳು ಭಯೋತ್ಪಾದನೆಯ ಮೂಲ ಕೇಂದ್ರ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ತನ್ನ ನಾಲಗೆಯನ್ನು ಹರಿಯಬಿಟ್ಟಿದ್ದಾರೆ.

- Advertisement -

ಇಂದು ಬೆಳ್ತಂಗಡಿ ಸಮೀಪದ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಾತಿ ವಾಸನೆಗಳನ್ನು ಹೊಂದಿರುವ ಮಠಗಳು ದೇಶಕ್ಕೆ ಅಪಾಯ. ನಾವು ಇವತ್ತು ನೋಡುತ್ತೇವೆ. ಜಗತ್ತಿಗೆ ಇಸ್ಲಾಮನ್ನು ಪರಿಚಯಿಸಲು ಮದರಸಾವನ್ನು ಪ್ರಾರಂಭಿಸಲಾಗಿತ್ತೇ ಹೊರತು ಅಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಬೇಕು, ಜಿಹಾದ್ ಮಾಡಬೇಕೆಂದು ಅಲ್ಲ. ಆದರೆ ಅಲ್ಲಿ ಜಾತಿ ವಾಸನೆ ಹುಟ್ಟಿದರಿಂದಲೇ ಅಲ್ಲಿ ಭಯಾನಕವಾಗಿದೆ ಮತ್ತು ಭಯೋತ್ಪಾದನೆಯ ಮೂಲವಾಗಿದೆ ಎಂದು ಹರಿಕೃಷ್ಣ ಬಂಟ್ವಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮದ್ರಸ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಹರಿಕೃಷ್ಣ ಬಂಟ್ವಾಳ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Join Whatsapp