ಹಳೆಯಂಗಡಿ| ಸೆಲೂನ್ ಮಾಲೀಕ ಆತ್ಮಹತ್ಯೆ; ರೈಲ್ವೆ ಕ್ರಾಸ್ ನಲ್ಲಿ ಮೃತದೇಹ ಪತ್ತೆ

Prasthutha|

ಹಳೆಯಂಗಡಿ: ಹಳೆಯಂಗಡಿ ಪಕ್ಷಿಕೆರೆ ರಸ್ತೆಯ ಲೈಟ್ ಹೌಸ್ ನ ಸೆಲೂನ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ

- Advertisement -

ಮೃತ ವ್ಯಕ್ತಿಯನ್ನು ಪಕ್ಷಿಕೆರೆ ಪಂಜ ಕೊಯಿಕುಡೆ ನಿವಾಸಿ ದಿನೇಶ್ ಬಂಗೇರ (43) ಎಂದು ಗುರುತಿಸಲಾಗಿದೆ. ಇಂದಿರಾನಗರದ ರೈಲ್ವೆ ಕ್ರಾಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ಮುಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಆಸೀಫ್ ಆಪದ್ಬಾಂಧವ ನೆರವಾಗಿದ್ದಾರೆ.

Join Whatsapp