ಹಲಾಲ್‌, ಹಿಜಾಬ್‌ ಮುಂತಾದವುಗಳು ಚುನಾವಣೆ ವಿಷಯವೇ ಅಲ್ಲ, ಜನ ಅದನ್ನು ಮರೆತುಬಿಟ್ಟಿದ್ದಾರೆ ಎಂದ ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಹಲಾಲ್‌, ಹಿಜಾಬ್‌ ಮುಂತಾದವುಗಳು ಚುನಾವಣೆ ವಿಷಯವೇ ಅಲ್ಲ, ಜನ ಅದನ್ನು ಮರೆತುಬಿಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -

ಇಂಗ್ಲಿಷ್‌ ಸುದ್ದಿ ವಾಹಿನಿ ಇಂಡಿಯಾ ಟುಡೆಯೊಂದಿಗೆ ನಡೆಸಿದ ಸಂವಾದದಲ್ಲಿ ಬೊಮ್ಮಾಯಿ ಈ ರೀತಿ ಹೇಳಿದ್ದಾರೆ.

ಹಲಾಲ್, ಹಿಜಾಬ್, ಈಗ ಚುನಾವಣಾ ವಿಷಯವೇ ಅಲ್ಲ. ಈಗ ಎಲ್ಲವೂ ಮುಗಿದು ಹೊಗಿದೆ. ರಾಜ್ಯದ ಜನರೇ ಅದನ್ನು ಮರೆತಿದ್ದಾರೆ. ‌ಕರ್ನಾಟಕದಲ್ಲಿ ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ‌ ಇವೆ ಎಂದರು.

- Advertisement -

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಶಿಕಾರಿಪುರದಲ್ಲಿ  ಟಿಪ್ಪು, ಸಾವರ್ಕರ್, ಹಿಜಾಬ್, ಹಲಾಲ್ ಇಂತಹ ವಿಷಯಗಳ ವಿವಾದಗಳನ್ನು ನಾನು ಬೆಂಬಲಿಸಲು ಹೋಗುವುದಿಲ್ಲ. ಪಕ್ಷದ ಇತರ ನಾಯಕರು ಇಂತಹ ಸಮಸ್ಯೆಗಳನ್ನು ಬೆಂಬಲಿಸಿದರೆ ಅದು ಸರಿಯಲ್ಲ. ನಾನು ಅವರ ಜೊತೆ ಮಾತನಾಡಿ ಆ ರೀತಿ ಮಾತನಾಡದಂತೆ ಎಚ್ಚರಿಕೆ ನೀಡುತ್ತೇನೆ ಎಂದು ಹೇಳಿದ್ದರು

ಇದೀಗ ಇದೇ ರೀತಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Join Whatsapp