ಉತ್ತರಪ್ರದೇಶದಲ್ಲಿ ಗೂಂಡಾರಾಜ್: ಪೊಲೀಸರ ಸಮ್ಮುಖದಲ್ಲೇ ಯುವಕನ ಗುಂಪುಹತ್ಯೆ

Prasthutha|

ಮೀರತ್: ಗುಂಪುಹತ್ಯೆ ಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಮಿರ್ಝಾಪುರದಿಂದ ವರದಿಯಾಗಿದೆ. ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಒಬ್ಬರ ಕೊಲೆಯಾಗಿತ್ತು. ಪ್ರಸಕ್ತ ಕೊಲೆ ಆರೋಪಿಯನ್ನು ಆಕ್ರೋಶಿತ ಗುಂಪೊಂದು ಭೀಕರವಾಗಿ ಕೊಲೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

- Advertisement -

ಮಿರ್ಝಾಪುರದಲ್ಲಿ ಕೊಲೆ ಪ್ರಕರಣದ ಆರೋಪಿಯನ್ನು ಆಕ್ರೋಶಿತ ಗುಂಪೊಂದು ಮರದ ದೊಣ್ಣೆ, ದಿಮ್ಮಿ, ಇಟ್ಟಿಗೆ ಸೇರಿದಂತೆ ಮಾರಕಾಯುಧದಿಂದ ಹೊಡೆದು ಕೊಲ್ಲುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಯುಪಿ ಪೊಲೀಸರ ಸಮ್ಮುಖದಲ್ಲೇ ನಡೆದಿರುವ ಈ ಘಟನೆಯಲ್ಲಿ ಆಕ್ರೋಶಿತ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ನಂತರ ಭೀಕರವಾಗಿ ಕೊಲೆ ನಡೆಸಿರುವುದು ವೈರಲ್ ವೀಡಿಯೋದಿಂದ ಬಹಿರಂಗವಾಗಿದೆ.

ಪ್ರಸಕ್ತ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

- Advertisement -

ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ತೀರಾ ಹದೆಗೆಟ್ಟಿದ್ದು, ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರ ಇದನ್ನು ನಿಭಾಯಿಸುವಲ್ಲಿ ದಯನೀಯ ವೈಫಲ್ಯ ಕಂಡಿದೆ.

Join Whatsapp